ಮಜ್ಜನ ಸನ್ನದ್ದ

ಬೆಟ್ಟದ ಮೇಲೆ ನಿಂತಿರುವ ವಿರಾಟ್ ವಿರಾಗಿಯ ದೃಷ್ಟಿ ಅಂತರ್ಮುಖಿಯಾಗಿದೆ. ಆತ ಅಂತರಂಗದಲ್ಲಿ ಅಧ್ಯಾತ್ಮ..
ಮಹಾಮಸ್ತಕಾಭಿಷೇಕ (ಸಂಗ್ರಹ ಚಿತ್ರ)
ಮಹಾಮಸ್ತಕಾಭಿಷೇಕ (ಸಂಗ್ರಹ ಚಿತ್ರ)
Updated on

ಬೆಟ್ಟದ ಮೇಲೆ ನಿಂತಿರುವ ವಿರಾಟ್ ವಿರಾಗಿಯ ದೃಷ್ಟಿ ಅಂತರ್ಮುಖಿಯಾಗಿದೆ.

ಆತ ಅಂತರಂಗದಲ್ಲಿ ಅಧ್ಯಾತ್ಮದ ಸಾಧನೆಯ ಪರ್ವತಾಗ್ರಗಳನ್ನು ಏರಿ ಮುಟ್ಟಿದ್ದಾನೆ. ಅದಕ್ಕೆಂದೇ ಆತ ಅವಲೋಕಿತೇಶ್ವರ. ಆತನ ಪಾದಗಳ ಬಳಿ ಹೋಗುವ ನೂರು ಮೆಟ್ಟಿಲುಗಳು ಭಕ್ತರ ಶ್ರಮಕ್ಕೂ ಧ್ಯಾನಕ್ಕೂ ಆಹ್ವಾನ ನೀಡುತ್ತವೆ.

ಜ.21ರಿಂದ ಫೆ.2ರವರೆಗೆ ನಡೆಯಲಿರುವ ಮಹಾಮಸ್ತಕಾಭಿಷೇಕವನ್ನೂ ಗೊಮ್ಮಟೇಶ್ವರ ನಿಮೀಲಿತ ನೇತ್ರನಾಗಿಯೇ ಆನಂದಿಸುತ್ತಾನೆ. ಅದರ ಆನಂದಮಯ ನೋಟವೂ ನಮ್ಮ ನಿಮ್ಮ ಪಾಲಿಗಿದೆ. ಮಹಾಮಜ್ಜನಕ್ಕೆ ಕಾರ್ಕಳ ಸಜ್ಜಾಗಿದೆ. ಕಾರ್ಕಳವೆಂಬ ಪುಟ್ಟ ಊರು, 15ನೇ ಶತಮಾನದಲ್ಲಿ ಗೊಮ್ಮಟಮೂರ್ತಿಯನ್ನು ತನ್ನೊಳಗೆ ಅರಳಿಸಿಕೊಂಡ ಊರು ಬಿಡುಗಣ್ಣಾಗಿ ಈ ಸಂಭ್ರಮಕ್ಕೆ ಸಾಕ್ಷಿಯಾಗಲಿದೆ.

ನೀವಲ್ಲಿಗೆ ತೆರಳುವುದಾದರೆ ನೋಡಲು ಚತುರ್ಮುಖ ಬಸದಿ, ರಾಮಸಮುದ್ರಗಳೆಂಬ ಇತರ ಆಕರ್ಷಣೆಗಳೂ ಇವೆ. ಮೂಡು ಬಿದಿರೆಯಲ್ಲಿ ಸಾವಿರ ಕಂಬದ ಬಸದಿಯೂ ಇದೆ. ಹ್ಯಾಪ್ಪಿ ಮಸ್ತಕಾಭಿಷೇಕ?

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com