ಕಳೆದ ವಾರ ಬೆಂಗಳೂರಿನ ಕೆ.ಎಚ್ ಕಲ ಸೌಧ ರಂಗಾಸಕ್ತರಿಗೆ ಹೊಸ ಗುತ್ತಿಗೆಗಾರರಾದ ಪ್ರಭಾತ್ Auditoriums ರ ಹೊಣೆಯಲ್ಲಿ ಪುನಃ ತನ್ನ ಮುಚ್ಚಿದ ಬಾಗಿಲನ್ನು ತೆರೆದಿತ್ತು. ಸುಮಾರು 40 ಲಕ್ಷಕ್ಕೂ ಹೆಚ್ಚು ಹಣ ಖರ್ಚು ಮಾಡಿ, ಈ ಒಂದು ಸರ್ಕಾರಿ ರಂಗ ಮಂದಿರವನ್ನು ಜೀರ್ಣೋದ್ಧಾರ ಮಾಡಲು ಪ್ರಭಾತ್ ತಂಡದವರು ಒಂದು ತಿಂಗಳಿನಿಂದ ಸತತವಾಗಿ ಶ್ರಮಿಸಿದರು. ಮುರಿದು ಹೋದ ವೇದಿಕೆ ಇಂದ ಹಿಡಿದು, ಬಹುತೇಕ ರಂಗಮಂದಿರದ ಪರಿಕರಣಗಳನ್ನು ಬದಲಾಯಿಸಿ ಕಲಾವಿದರಲ್ಲಿ ಒಂದು ಹೊಸ ನಂಬಿಕೆಯನ್ನು ಸೃಷ್ಟಿ ಮಾಡಿದ್ದಾರೆ ಅಂದರೆ ತಪ್ಪಾಗಲಾರದು. ಈ ಜವಾಬ್ದಾರಿಯನ್ನು ಹೊತ್ತಿರುವ ಪ್ರಭಾತ್ ನ ವರ್ಷಿಣಿ, ಸ್ವತಃ ಓರ್ವ ರಂಗಭೂಮಿ ಕಲಾವಿದೆ. ಒಂದು ನಾಟಕ ವೇದಿಕೆ ಮೇಲೆ ಬರಬೇಕಾದರೆ ಕಲಾವಿದ ಪಡೋ ಕಷ್ಟ ಒಂದೆರಡಲ್ಲ, ಇದನ್ನು ಅರಿತಿರುವ ವರ್ಷಿಣಿ, "ಕೆ.ಹೆಚ್ ಕಲಾಸೌಧ ರಂಗಮಂದಿರವನ್ನು ರಂಗಭೂಮಿಯ ಕೇಂದ್ರ ಬಿಂದುವನ್ನಾಗಿ ಮಾಡೋ ಎಲ್ಲ ಯೋಜನೆಗಳನ್ನು ಹಾಕಿಕೊಂಡಿರುವುದಾಗಿ" ಹೇಳಿದ್ದಾರೆ. ಇನ್ನು ಕಾಮಗಾರಿ ಪ್ರಗತಿಯಲ್ಲಿರುವಾಗ್ಲೇ ಹಲವಾರು ರಂಗತಂಡಗಳು ಈ ರಂಗಮಂದಿರವನ್ನ ತಮ್ಮ ನಾಟಕದ ಪ್ರದರ್ಶನಕ್ಕೆ ಕಾಯ್ದು ಇರಿಸಿದ್ದಾರೆ.