ಅರ್ಥಶಾಸ್ತ್ರ(ಭಾಗ 2) ವಿಷಯದಲ್ಲಿ ಎಂಎ ಅಂತಿಮ ವರ್ಷದ ಪರೀಕ್ಷೆಯ ಫಲಿತಾಂಶ ಸೋಮವಾರ ಪ್ರಕಟಗೊಂಡಿದ್ದು, ರಾಜ್ ಕುಮಾರ್ ಉತ್ತೀರ್ಣರಾಗಿದ್ದಾರೆ. ಇದೀಗ ಅವರು ಸಾಮಾಜಿಕ–ಆರ್ಥಿಕ ವಿಚಾರಗಳ ಕುರಿತು ಲೇಖನ ಬರೆಯಲು ಉತ್ಸುಕರಾಗಿದ್ದಾರೆ. ಬಡತನ ಹಾಗೂ ನಿರುದ್ಯೋಗ ವಿಷಯಗಳಿಗೆ ಸಂಬಂಧಿಸಿದಂತೆ ಹೆಚ್ಚು ಆಸಕ್ತಿ ವಹಿಸಿರುವುದಾಗಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.