ಇದುವರೆಗೆ 345 ಅಂಕಣ ಬರಹ, 93 ಕವಿತೆ, 78 ಕತೆ, 5 ಕಾದಂಬರಿ ಮತ್ತು 1 ನಾಟಕ ರಚಿಸಿರುವ ಅಂತಃಕರಣ ಮೆರವಣಿಗೆ, ವೀರ ಸೈನಿಕ, ಆಟವಿಲ್ಲದ ಮೈದಾನ (ಕಥಾ ಸಂಕಲನ), ), ಭಾರತಿವನದ ಅರಳಿಮರ (ಕಾಡಿನ ಕಥೆಗಳು), ), ರಾಮಪುರದ ಗೆಳೆಯರು, ಆಜಾದ್ ನಗರದ ಆಟಗಾರರು, ಹರಳಿಮಠದ ಸಾಹಸಿ ಹುಡುಗರು, ಗ್ವಾಲಿಮರ್ ರಹಸ್ಯ(ಕಾದಂಬರಿ), ಅಮ್ಮನ ಸಿಟ್ಟು, ಗೆಲ್ಲುವೆನು ನಾ ಗೆಲ್ಲುವೆನು, ಕಣ್ಣಾಮುಚ್ಚಾಲೆ (ಕವನ ಸಂಕಲನ) ಸೇರಿದಂತೆ ಹಲವಾರು ಸಾಹಿತ್ಯ ಕೃತಿಗಳ ಲೇಖಕನಾಗಿದ್ದಾನೆ. . ಈತ ಬರೆದ ಪ್ರವಾಸ ಕಥನಗಳು, ಕವನಗಳು ರಾಜ್ಯದ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ, ಇದಲ್ಲದೆ 'ಎಚ್ಚರಿಕೆ', 'ಜೀವನ್ಮುಖಿ' ಹಾಗೂ ಅಂತರ್ಜಾಲ ಪತ್ರಿಕೆಯಾದ 'ವಿಶ್ವ ಕನ್ನಡಿಗ' ದಲ್ಲಿ ವಾರಕ್ಕೆ ಎರಡು ಅಂಕಣ ಬರೆಯುತ್ತಾನೆ.