ತಲಸ್ಸೇಮಿಯಾ ಹಾಗೂ ಮಧುಮೇಹ ರೋಗದಿಂದ ಬಳಲುತ್ತಿರುವ ಬಾಲಕ ಶಶಾಂಕ್ ಪೊಲೀಸ್ ಅಧಿಕಾರಿಯಾಗುವ ಕನಸು ಕಂಡಿದ್ದ. ಆದರೆ ಭೀಕರ ರೋಗದಿಂದ ಬಳಲುತ್ತಿರುವ ಬಾಲಕ ಸರಿಯಾಗಿ ಶಾಲೆಗೆ ತೆರಳಲೂ ಸಾಧ್ಯವಾಗದೆ ಇರುವುದು ಅವನನ್ನು ಪೋಲೀಸ್ ಅಧಿಕಾರಿಯಾಗುವ ಕನಸಿಂದ ದೂರ ಉಳಿಸಿತ್ತು. ಆದರೆ ಈ ಬಾಲಕನ ಆಸೆಯ ಕುರಿತು ತಿಳಿದ ವಿವಿ ಪುರಂ ಪೋಲೀಸ್ ಠಾಣಾಧಿಕಾರಿ ಟಿ.ಡಿ. ಮುನಿರಾಜು ಅವನಿಗೆ ಈ ಅದ್ಭುತ ಅವಕಾಶ ಒದಗಿಸಿಕೊಟ್ಟರು.