ಈ ಊರಲ್ಲಿ ಎಲ್ಲರೂ ಬಿಳಿ ಪಂಚೆಯನ್ನುಟ್ಟವರೇ ಕಾಣುತ್ತಾರೆ. ತಮಿಳುನಾಡು ಆಂಧ್ರ ಪ್ರದೇಶದ ಅಯ್ಯಂಗಾರ್, ಅಯ್ಯರ್ ಬ್ರಾಹ್ಮಣರಂತೆ ಕಾಣುವ ಇವರು ಕರ್ನಾಟಕದ ವಿರಳ ಜನ ಸಮುದಾಯವಾದ ಸಂಕೇತಿ ಬ್ರಾಹ್ಮಣ ಕುಟುಂಬದವರು.ಇವರು ಮನೆಯಲ್ಲಿ ಕೇವಲ ಸಂಸ್ಕೃತವನ್ನೇ ಮಾತನಾಡುತ್ತಾರೆ. ಇಂದಿನ ಆಧುನಿಕ ಯುಗದಲ್ಲಿಯೂ ಇಲ್ಲಿನ ಯುವಕರು ಸಂಸ್ಕೃತ ಮಾತನಾಡುವುದು ಅಚ್ಚರಿಯಾಗುತ್ತದೆ.