ಕನ್ನಡ ನಾಡಿನ ಈ ಗ್ರಾಮದಲ್ಲಿ ಸಂಸ್ಕೃತವೇ ಮನೆಮಾತು!

ಸಂಸ್ಕೃತಕ್ಕೆ ಭಾರತ ಮಾತ್ರವಲ್ಲ ವಿಶ್ವದೆಲ್ಲೆಡೆ ಗೌರವವಿದೆ. ಭಾರತೀಯ ಸಂಶೋಧಕರು, ವಿದೇಶೀಯರು ಸಹ ಈ ಭಾಷೆಯ ಸೌಂದರ್ಯಕ್ಕೆ ಮಾರು ಹ್ಹೋಗಿದ್ದಾರೆ.
ಕನ್ನಡ ನಾಡಿನ ಈ ಗ್ರಾಮದಲ್ಲಿ ಸಂಸ್ಕೃತವೇ ಮನೆಮಾತು!
ಕನ್ನಡ ನಾಡಿನ ಈ ಗ್ರಾಮದಲ್ಲಿ ಸಂಸ್ಕೃತವೇ ಮನೆಮಾತು!
 ಸಂಸ್ಕೃತಕ್ಕೆ ಭಾರತ ಮಾತ್ರವಲ್ಲ ವಿಶ್ವದೆಲ್ಲೆಡೆ ಗೌರವವಿದೆ. ಭಾರತೀಯ ಸಂಶೋಧಕರು, ವಿದೇಶೀಯರು ಸಹ ಈ ಭಾಷೆಯ ಸೌಂದರ್ಯಕ್ಕೆ ಮಾರು ಹೋಗಿದ್ದಾರೆ. 
ಆದರೆ ಇತ್ತೀಚೆಗೆ ನಮ್ಮ ಯುವ ಪೀಳಿಗೆಯಲ್ಲಿ ಸಂಸ್ಕೃತದ ಬಗ್ಗೆ ಅಸಡ್ಡೆ ಬೆಳೆಯುತ್ತಿರುವುದನ್ನು ಕಾಣುತ್ತೇವೆ. ಸಂಸ್ಕೃತವೆಂದರೆ ಹಳೆ ಸಂಪ್ರದಾಯಕ್ಕೇ ಒಗ್ಗಿರುವ ಬಾಷೆ ಎನ್ನುವುದು ಅವರ ವಾದ. ಇದೆಲ್ಲದರ ನಡುವೆ ಕರ್ನಾಟಕದ ಪುಟ್ಟ ಗ್ರಾಮವೊಂದು ಸಂಸ್ಕೃತವನ್ನೇ ಉಸಿರಾಗಿಸಿಕೊಂಡಿದೆ ಎಂದರೆ ನಂಬುವಿರಾ?
ಹೌದು ಶಿವಮೊಗ್ಗ ಸಮೀಪದಲ್ಲಿರುವ ಪುಟ್ಟ ಗ್ರಾಮವೊಂದು ಸಂಸ್ಕೃತ ಗ್ರಾಮ ಎಂದು ಖ್ಯಾತಿ ಪಡೆದಿದೆ. ಮತ್ತೂರು - ಶಿವಮೊಗ್ಗದಿಂದ ಕೇವಲ 5  ಕಿಲೋ ಮೀಟರ್ ಅಂತರದಲ್ಲಿದೆ.
ಈ ಊರಲ್ಲಿ ಎಲ್ಲರೂ ಬಿಳಿ ಪಂಚೆಯನ್ನುಟ್ಟವರೇ ಕಾಣುತ್ತಾರೆ. ತಮಿಳುನಾಡು ಆಂಧ್ರ ಪ್ರದೇಶದ ಅಯ್ಯಂಗಾರ್, ಅಯ್ಯರ್ ಬ್ರಾಹ್ಮಣರಂತೆ ಕಾಣುವ ಇವರು ಕರ್ನಾಟಕದ ವಿರಳ ಜನ ಸಮುದಾಯವಾದ ಸಂಕೇತಿ ಬ್ರಾಹ್ಮಣ ಕುಟುಂಬದವರು.ಇವರು ಮನೆಯಲ್ಲಿ ಕೇವಲ ಸಂಸ್ಕೃತವನ್ನೇ ಮಾತನಾಡುತ್ತಾರೆ. ಇಂದಿನ ಆಧುನಿಕ ಯುಗದಲ್ಲಿಯೂ ಇಲ್ಲಿನ ಯುವಕರು ಸಂಸ್ಕೃತ  ಮಾತನಾಡುವುದು ಅಚ್ಚರಿಯಾಗುತ್ತದೆ.
ಸಂಸ್ಕೃತವನ್ನು ದೇಶೀಯ ಭಾಷೆಯನ್ನಾಗಿಸಿ ಎಂದು ಹಲವು ವರ್ಷಗಳಿಂಡ ಹೋರಾಟ ನಡೆಸುತ್ತಿರುವ ಇಲ್ಲಿನ ಜನತೆ ವೇದ ವೇದಾಂಗಗಳಲ್ಲಿ ಪಾರಂಗತರಾಗಿದ್ದಾರೆ. ದೇಶದಲ್ಲಿ ಅತಿ ಹೆಚ್ಚು ಸಂಸ್ಕೃತ ಪದವಿ ಪಡೆದವರು ಈ ಗ್ರಾಮದಲ್ಲಿದ್ದಾರೆ ಎನ್ನುವ ಹೆಮ್ಮೆ ಸಹ ಈ ಗ್ರಾಮಸ್ಥರದಾಗಿದೆ.
ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ವೇದಾಭ್ಯಾಸಕ್ಕೆಂದೇ ಮೀಸಲಾಗಿರಿಸಲಾದ ಈ ಗ್ರಾಮದಲ್ಲಿ ಕೇರಳದ ಪಲ್ಘಾಟ್‍ನಿಂದ ಬಂದ ಸಂಕೇತಿಗಳು ನೆಲೆಸಿದ್ದಾರೆ. ಇವರು ಇಲ್ಲಿನ ತುಂಗಾ ತೀರವನ್ನು ತಮ್ಮ ವೇದ ಶಾಸ್ತ್ರಗಳ ಅಭ್ಯಾಸಕ್ಕಾಗಿ ಮುಡಿಪಾಗಿರಿಸಿಕೊಂಡಿದ್ದಾರೆ.
ದೇಶದ ನಾನಾ ಭಾಗಗಳಿಂದ ನಾನಾ ಧರ್ಮ, ಜಾತಿಯ ಯುವಕರು ಇಲ್ಲಿಗೆ ಬಂದು ವೇದಾಭ್ಯಾಸ ಪಡೆದು ಹೋಗುತ್ತಾರೆ. ಇಂತಹಾ ವಿದ್ಯಾರ್ಥಿಗಳಲ್ಲಿ ಮುಸ್ಲಿಮ್ ವಿದ್ಯಾರ್ಥಿಗಳು ಸೇರಿದ್ದಾರೆನ್ನುವುದು ಇನ್ನೂ ಗಮನಾರ್ಹ ಸಂಗತಿ.
ಗಮಕ ಹಾಡುಗಾರಿಕೆಗಾಗಿ ಸಹ ಈ ಮತ್ತೂರು ಗ್ರಾಮ ಹೆಸರಾಗಿದೆ.ಇಲ್ಲಿರುವ ಪ್ರತಿ ಮನೆಯಲ್ಲಿಯೂ ಗಮಕ ಹಾಡುವವರು ಇದ್ದು ಅವರು ಸಂಜೆ ವೇಳೆಗೆ ದೇವಸ್ಥಾನದ ಕಟ್ಟೆಯಲ್ಲಿ ಕು:ಳಿತು ತಮ್ಮ ಅಭ್ಯಾಸ ನಡೆಸುತ್ತಾರೆ.
ಈ ಊರಿನವರಾದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮತ್ತೂರು ಕೃಷ್ಣಮೂರ್ತಿ:ದೇಶದ ಪ್ರಖ್ಯಾತ ವಿದ್ವಾಂಸರೆಂದು ಗುರುತಿಸಿಕೊಂಡಿದ್ದರು. 
-ರಾಘವೇಂದ್ರ ಅಡಿಗ ಎಚ್ಚೆನ್
raghavendraadiga1000@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com