ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಪ್ರಸಿದ್ಧ 'ಶಂಕರಪುರ ಮಲ್ಲಿಗೆ' ಕೃಷಿ ಮಾಡುತ್ತಿರುವ ರೈತ!

ಕೆಸರಿನಿಂದಲೇ (ಮಣ್ಣು) ಜೀವನ ಸಾಗಿಸುವ ಮಾಂತ್ರಿಕ ಎಂದರೆ ರೈತ. ಆದರೆ ಕರಾವಳಿ ಜಿಲ್ಲೆ ಉಡುಪಿಯ ಜೋಸೆಫ್ ಲೋಬೋ ಎಂಬ 44 ವರ್ಷದ ರೈತನ ವಿಷಯದಲ್ಲಿ ಅದು ವ್ಯತಿರಿಕ್ತವಾಗಿದ್ದು, ಕಡಿಮೆ ಮಣ್ಣಿನಲ್ಲಿ ಕೃಷಿ ಮಾಡುವ ಮೂಲಕ ಕರಾವಳಿಯಲ್ಲಿ ಖ್ಯಾತಿ ಗಳಿಸಿದ್ದಾರೆ.
ಕರಾವಳಿ ಆಧುನಿಕ ಕೃಷಿಕ ಲೋಬೋ
ಕರಾವಳಿ ಆಧುನಿಕ ಕೃಷಿಕ ಲೋಬೋ
Updated on

ಉಡುಪಿ: ಕೆಸರಿನಿಂದಲೇ (ಮಣ್ಣು) ಜೀವನ ಸಾಗಿಸುವ ಮಾಂತ್ರಿಕ ಎಂದರೆ ರೈತ. ಆದರೆ ಕರಾವಳಿ ಜಿಲ್ಲೆ ಉಡುಪಿಯ ಜೋಸೆಫ್ ಲೋಬೋ ಎಂಬ 44 ವರ್ಷದ ರೈತನ ವಿಷಯದಲ್ಲಿ ಅದು ವ್ಯತಿರಿಕ್ತವಾಗಿದ್ದು, ಕಡಿಮೆ ಮಣ್ಣಿನಲ್ಲಿ ಕೃಷಿ ಮಾಡುವ ಮೂಲಕ ಕರಾವಳಿಯಲ್ಲಿ ಖ್ಯಾತಿ ಗಳಿಸಿದ್ದಾರೆ.

ಲೋಬೋ ಅವರು ಪ್ರಬಲವಾದ ಪಶ್ಚಿಮ ಘಟ್ಟಗಳು ಮತ್ತು ಅರಬ್ಬಿ ಸಮುದ್ರದ ನಡುವೆ ಇರುವ ಪುಟ್ಟ ಗ್ರಾಮವಾದ ಶಂಕರಪುರದಿಂದ ಬಂದವರು. ಶಂಕರಪುರವನ್ನು ಕರ್ನಾಟಕ ಕರಾವಳಿಯ ಮಲ್ಲಿಗೆಯ ರಾಜಧಾನಿ ಎಂದು ಕರೆಯಲಾಗುತ್ತದೆ. ಶಂಕರಪುರ ಮಲ್ಲಿಗೆ (ಕನ್ನಡದಲ್ಲಿ ಮಲ್ಲಿಗೆ ಎಂದರೆ ಮಲ್ಲಿಗೆ ಹೂವುಗಳು) ಹೆಸರುವಾಸಿಯಾಗಿದೆ. ಗ್ರಾಮದ ಬಹುತೇಕ ನಿವಾಸಿಗಳಂತೆ ಲೋಬೋ ಕೂಡ ಶಂಕರಪುರ ಮಲ್ಲಿಗೆ ಕೃಷಿ ಮಾಡುತ್ತಾರೆ. ಇದೇ ಮಲ್ಲಿಗೆ ಹೂವಿಗೆ 2008 ರಲ್ಲಿ GI ಟ್ಯಾಗ್ ಅನ್ನು ಕೂಡ ನೀಡಲಾಗಿತ್ತು.

ಶಂಕರಪುರದಲ್ಲಿ ಲೋಬೋ ಅವರ ಹೊರತಾಗಿಯೂ ಸಾಕಷ್ಟು ಮಂದಿ ರೈತರು ಮಲ್ಲಿಗೆ ಬೆಳೆಯುತ್ತಿದ್ದಾರೆ. ಆದರೆ ಲೋಬೋ ಅವರು ಇವರಿಗಿಂತ ಪ್ರತ್ಯೇಕ. ಹೌದು.. ಉಳಿದ ಬೆಳೆಗಾರರಿಂದ ಲೋಬೋ ಅವರನ್ನು ಪ್ರತ್ಯೇಕಿಸುವುದು ಏನೆಂದರೆ, ಅವರು ತಮ್ಮ ಅಮೂಲ್ಯವಾದ ಬೆಳೆಯನ್ನು ಮಣ್ಣಿಲ್ಲದೆ ಬೆಳೆಯಲು ಪ್ರಯತ್ನಿಸಿದ್ದಾರೆ! ಲೋಬೋ ಅವರು ನವೀನ ಹೈಡ್ರೋಪೋನಿಕ್ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡ ಪ್ರದೇಶದ ಮೊದಲ ಬೆಳೆಗಾರರಾಗಿದ್ದಾರೆ. ಇದು ಸಾಮಾನ್ಯರ ಭಾಷೆಯಲ್ಲಿ ಕಡಿಮೆಮಣ್ಣಿನ ಕೃಷಿಯಾಗಿದೆ. ಲೋಬೋ ಅವರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, GKVK, ಬೆಂಗಳೂರಿನ ಕಾರ್ಯಾಗಾರದಲ್ಲಿ ಭಾಗವಹಿಸಿದ ನಂತರ ಸ್ಫೂರ್ತಿ ಪಡೆದು ಹೊಸ ಕೃಷಿ ವಿಧಾನ ಪ್ರಯೋಗವನ್ನು ಪ್ರಾರಂಭಿಸಿದರು. ಲೋಬೋ ಈಗಾಗಲೇ 32 ಮಲ್ಲಿಗೆ ಗಿಡಗಳನ್ನು ಹೊಂದಿದ್ದು, ಮೂರು ಹೈಡ್ರೋಪೋನಿಕ್ ತಂತ್ರವನ್ನು ಬಳಸಿ ಬೆಳೆಸಲಾಗುತ್ತಿದೆ.

ಈ ಬಗ್ಗೆ ಹೆಮ್ಮೆಯಿಂದಲೇ ಮಾತನಾಡಿರುವ ರೈತ ಲೋಬೋ, "ನಾನು ನನ್ನನ್ನು ಕೃಷಿಕ ಎಂದು ಕರೆಯಲು ಇಷ್ಟಪಡುತ್ತೇನೆ. ಏಕೆಂದರೆ ಆವಿಷ್ಕಾರವು ನಾವು ಮಾಡುವ ಕೆಲಸಕ್ಕೆ ಮೌಲ್ಯವನ್ನು ಸೇರಿಸುತ್ತದೆ. ನಾನು ಇತರರಂತೆ ಮಲ್ಲಿಗೆಯನ್ನು ಬೆಳೆಯಬಹುದಿತ್ತು. ಆದರೆ ನಾನು ಈಗಾಗಲೇ ಮಾಡುತ್ತಿರುವುದನ್ನು ಏಕೆ ತೃಪ್ತಿಪಡಿಸಬೇಕು ಎಂದು ನಾನು ಯೋಚಿಸಿದೆ. ನಾನು ವಿಭಿನ್ನವಾಗಿರಲು ಬಯಸುತ್ತೇನೆ. ನನ್ನ ಕೃಷಿ ವಿಧಾನ ಸರಳವಾಗಿದೆ. ನಾನು ನೆಟೆಡ್-ಬುಟ್ಟಿಯನ್ನು ತೆಗೆದುಕೊಂಡು ಅದನ್ನು ಕೋಕೋ ಪೀಟ್‌ (ತೆಂಗಿನ ನಾರು)ನಿಂದ ತುಂಬಿಸುತ್ತೇನೆ. ನಾನು ನಂತರ ಸಾವಯವ ದ್ರವ ಗೊಬ್ಬರ ತುಂಬಿದ ಬಕೆಟ್ ತೆಗೆದುಕೊಳ್ಳುತ್ತೇನೆ. ನಂತರ ನಾನು ಮಲ್ಲಿಗೆಯ ಸಸಿಯನ್ನು ಅದರ ಬೇರುಗಳಿಗೆ ಹಾನಿಯಾಗದಂತೆ ಎಚ್ಚರಿಕೆಯಿಂದ ಹೊರತೆಗೆದು ಬುಟ್ಟಿಯಲ್ಲಿ ನೆಡುತ್ತೇನೆ. ನಂತರ ನಾನು ಬುಟ್ಟಿಯನ್ನು ಬಕೆಟ್ ಮೇಲೆ ಇಟ್ಟು,  ಕೆಳಗಿನ ಬೇರುಗಳು ಬೆಳೆದು ಬಕೆಟ್‌ನಲ್ಲಿ ತುಂಬಿದ ದ್ರವರೂಪದ ಗೊಬ್ಬರದಿಂದ ಅಗತ್ಯವಾದ ಪೋಷಕಾಂಶವನ್ನು ಹೀರಿಕೊಳ್ಳುತ್ತವೆ ಎಂದು ಅವರು ವಿವರಿಸುತ್ತಾರೆ.

ಮಣ್ಣಿಲ್ಲದೆ ಮಲ್ಲಿಗೆ ಬೆಳೆಯುವುದರಿಂದ ಆಗುವ ಪ್ರಯೋಜನವೇನು ಎಂದು ಕೇಳಿದರೆ, ''ಗಿಡಕ್ಕೆ ಯಾವುದೇ ರೋಗ ತಗಲುವ ಅಪಾಯವಿಲ್ಲ. ಸಸ್ಯಗಳಿಗೆ ಸಾಮಾನ್ಯವಾಗಿ ಬರುವ ಹೆಚ್ಚಿನ ರೋಗಗಳು ಮಣ್ಣಿನ ಮೂಲಕ. ನಾನು ಹೈಡ್ರೋಪೋನಿಕ್ ವಿಧಾನದಲ್ಲಿ ಬೆಳೆಸುತ್ತಿರುವ ಮೂರು ಮಲ್ಲಿಗೆ ಗಿಡಗಳು ಕೇವಲ ಎರಡೂವರೆ ತಿಂಗಳಲ್ಲಿ ಹೂ ಬಿಡಲಾರಂಭಿಸಿದವು. ಸಾಂಪ್ರದಾಯಿಕ ವಿಧಾನದಲ್ಲಿ, ಇದು ಸುಮಾರು 4 ರಿಂದ 5 ತಿಂಗಳ ನಂತರ ಮಾತ್ರ ಹೂಬಿಡುತ್ತದೆ ಎಂದು ಹೇಳಿದ್ದಾರೆ.

ಮಲ್ಲಿಗೆಯ ಹೊರತಾಗಿ, ಲೋಬೋ ಅವರು ಹೈಡ್ರೋಪೋನಿಕ್ ವಿಧಾನವನ್ನು ಬಳಸಿಕೊಂಡು ಚಿಕೂ, ಮಲ್ಬೆರಿ ಮತ್ತು ಎಲ್ಲಾ ಋತುವಿನ ಮಾವನ್ನು ಬೆಳೆಯುವ ಪ್ರಯೋಗವನ್ನು ಮಾಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ಸರಿಯಾದ ರುಚಿಗೆ ಸರಿಯಾದ ಜಾತಿಯ ಮಾವಿನ ಸಸ್ಯಗಳನ್ನು ಆಯ್ಕೆ ಮಾಡುವುದು ಅತ್ಯಗತ್ಯ ಎಂದು ಹೇಳಿದ್ದಾರೆ. ವೃಕ್ಷವಾಗಿ ಬೆಳೆಯುವ ಆ ಜಾತಿ ಮರಗಳನ್ನು ಹೈಡ್ರೋಪೋನಿಕ್ ವಿಧಾನದಲ್ಲಿ ಸೀಮಿತಗೊಳಿಸಲಾಗುವುದಿಲ್ಲ. ಪೊದೆಯಂತೆ ಬೆಳೆಯುವ ಗಿಡಗಳೇ ಸೂಕ್ತ’ ಎಂದು ಲೋಬೋ ಅವರು ಹೇಳುತ್ತಾರೆ. ಲೋಬೋ ಅವರ ಪತ್ನಿ ನೀಮಾ ಲೋಬೋ ಮತ್ತು ಮಗಳು ಪಿಯು ವಿದ್ಯಾರ್ಥಿನಿ ಜನಿಶಾ ಲೋಬೋ ಅವರು ಕೂಡ ಕೃಷಿಯಲ್ಲಿ ಅಷ್ಟೇ ಉತ್ಸಾಹವನ್ನು ಹೊಂದಿದ್ದಾರೆ. ತಮ್ಮ ತಂದೆಯ ನೂತನ ವಿಧಾನಕ್ಕೆ ಮಾರುಹೋಗಿರುವ ಅವರು, ಈ ವಿಧಾನದಿಂದ ಸಸ್ಯಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸುಲಭವಾಗಿ ಸ್ಥಳಾಂತರಿಸಲು ಸಹಾಯವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಹೈಡ್ರೋಪೋನಿಕ್ ಕೃಷಿಯ ಬಗ್ಗೆ ತಿಳಿದುಕೊಳ್ಳಲು ತಮ್ಮ ಗ್ರಾಮದ ಹಲವಾರು ರೈತರು ತಮ್ಮನ್ನು ಸಂಪರ್ಕಿಸಿದ್ದಾರೆ ಎಂದು ಲೋಬೋ ಹೇಳಿದ್ದು, ‘‘ಶಿರ್ವದಲ್ಲಿ 25 ಎಕರೆ ಜಮೀನನ್ನು ಮಲ್ಲಿಗೆ ಕ್ಷೇತ್ರವನ್ನಾಗಿ ಪರಿವರ್ತಿಸಲು ಈಗ ಆದೇಶವಿದೆ. ತಮ್ಮ ಮಲ್ಲಿಗೆ ಬೆಳೆಯುವ ಸಾಹಸವನ್ನು ಪ್ರಾರಂಭಿಸುವ ಮೊದಲು ಯುವಕರು ನನ್ನ ಬಳಿಗೆ ಬರುತ್ತಿದ್ದಾರೆ. ನಾನು ಕೂಡ ಮಲ್ಲಿಗೆ ಬೆಳೆಯುವ ಪ್ರದೇಶವನ್ನು ವಿಸ್ತರಿಸುವ ಯೋಜನೆ ಮಾಡುತ್ತಿದ್ದೇನೆ. ನನ್ನ 400 ಚದರ ಅಡಿ ತಾರಸಿಯಲ್ಲಿ ನಾನು ಹೆಚ್ಚು ಮಲ್ಲಿಗೆ ಸಸಿಗಳನ್ನು ನೆಡುತ್ತೇನೆ ಎಂದು ಲೋಬೋ ಅವರು ಹೇಳಿದ್ದಾರೆ.

ಜಿಕೆವಿಕೆ ಕೃಷಿ ಮೇಳದಲ್ಲಿ ಅರಳಿದ ಕನಸು-ಈಗ ನನಸು
ಬೆಂಗಳೂರಿನ ಜಿಕೆವಿಕೆಯಲ್ಲಿ ನಡೆದ ಕಾರ್ಯಾಗಾರದಿಂದ ಪಡೆದ ಮೂಲ ಕಲ್ಪನೆಯ ಹೊರತಾಗಿ, ಲೋಬೋ ಅವರು ಯೂಟ್ಯೂಬ್‌ನಲ್ಲಿ ಆಧುನಿಕ ಕೃಷಿ ವಿಧಾನದ ವೀಡಿಯೊಗಳನ್ನು ನೋಡುವ ಮೂಲಕ ಜ್ಞಾನ ಭಂಡಾರವನ್ನು ಉತ್ತಮಪಡಿಸಿಕೊಂಡರು. ಅವರ ಸಂಬಂಧಿ - ಜೇಸನ್ - ಇಸ್ರೇಲ್‌ನಲ್ಲಿ ಕೆಲಸ ಮಾಡುತ್ತಿದ್ದು, ಅಲ್ಲಿ ವ್ಯಾಪಕವಾಗಿ ಅಭ್ಯಾಸ ಮಾಡುತ್ತಿರುವ ಈ ಕೃಷಿ ವಿಧಾನವನ್ನು ಕೈಗೆತ್ತಿಕೊಳ್ಳಲು ಲೋಬೋ ಅವರನ್ನು ಪ್ರೇರೇಪಿಸಿದರು. ಸಮಗ್ರ ಕೃಷಿ ವಿಧಾನದ ಪೋಷಕರಾಗಿರುವ ಲೋಬೋ ಅವರು 11 ವಿಧದ ಪೇರಲೆ ಮತ್ತು ಇತರ ಹಣ್ಣುಗಳನ್ನು ಹೊಂದಿರುವ ಸಸ್ಯಗಳನ್ನು ಸಹ ಬೆಳೆಯುತ್ತಾರೆ. ಅವರ ಬಳಿ 35 ಜೇನು ಪೆಟ್ಟಿಗೆಗಳು ಮತ್ತು ಹಾಲು ನೀಡುವ ಹಸು ಕೂಡ ಇದೆ. ಅವರು ಸರ್ಕಾರದಿಂದ ಸಹಾಯಧನ ಪಡೆದಿದ್ದೀರಾ ಎಂದು ಕೇಳಿದಾಗ, ಲೋಬೋ ಅವರು ನಕಾರಾತ್ಮಕವಾಗಿ ಉತ್ತರಿಸಿದ್ದು, ಅದು "ಮಲ್ಲಿಗೆಯನ್ನು ಬೆಳೆಸುವುದಕ್ಕಿಂತ ಹೆಚ್ಚು ತೊಡಕಿನ ಕೆಲಸ ಎಂದು ನಾನು ಭಾವಿಸುತ್ತೇನೆ!"

ಕರಾವಳಿಯ ಹೆಮ್ಮೆ ಶಂಕರಪುರ ಮಲ್ಲಿಗೆ
ಕರಾವಳಿಯ ಶಂಕರಪುರ ಮಲ್ಲಿಗೆಗೆ 2008 ರಲ್ಲಿ ಜಿಐ ಟ್ಯಾಗ್ ನೀಡಲಾಗಿತ್ತು. ಈ ಶಂಕರಪುರ ಮಲ್ಲಿಗೆ ಹೂ ತನ್ನ ಸುಗಂಧಕ್ಕೆ ಹೆಸರುವಾಸಿಯಾಗಿದೆ. ಸ್ಥಳೀಯ ಮಾರುಕಟ್ಟೆಗಳನ್ನು ಹೊರತುಪಡಿಸಿ ಮುಂಬೈ ಮತ್ತು ವಿದೇಶಗಳಲ್ಲಿ ಈ ಹೂವಿಗೆ ಬಹಳ ಬೇಡಿಕೆಯಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com