ಸರ್ಕಾರಿ ಕೆಲಸ ಬಿಟ್ಟು ಮರುಭೂಮಿಯಲ್ಲಿ ಕಾಡು ಸೃಷ್ಟಿಸಿದ ಆದಿತ್ಯ ಸಿಂಗ್ ನಿಧನ!

ಕಾಡುಗಳನ್ನು ಕಡಿದು ಆ ಸ್ಥಳಗಳಲ್ಲಿ ಕಟ್ಟಡಗಳು ಮತ್ತು ಕಾರ್ಖಾನೆಗಳನ್ನು ನಿರ್ಮಿಸುವುದು ಸಾಮಾನ್ಯ ಅಭ್ಯಾಸವಾಗಿದೆ. ಆದರೆ ಇಂದು ನಾವು ಸಂಪೂರ್ಣವಾಗಿ ವಿಭಿನ್ನವಾದ ಘಟನೆಯ ಬಗ್ಗೆ ಹೇಳುತ್ತೇವೆ. ಓರ್ವ ವ್ಯಕ್ತಿಯು ಅರಣ್ಯವನ್ನು ಸೃಷ್ಟಿಸಿದ್ದಾರೆ. ಅದು ಕೂಡ ಬಂಜರು ಭೂಮಿಯಲ್ಲಿ.
ಆದಿತ್ಯ ಸಿಂಗ್
ಆದಿತ್ಯ ಸಿಂಗ್
Updated on

ಕಾಡುಗಳನ್ನು ಕಡಿದು ಆ ಸ್ಥಳಗಳಲ್ಲಿ ಕಟ್ಟಡಗಳು ಮತ್ತು ಕಾರ್ಖಾನೆಗಳನ್ನು ನಿರ್ಮಿಸುವುದು ಸಾಮಾನ್ಯ ಅಭ್ಯಾಸವಾಗಿದೆ. ಆದರೆ ಇಂದು ನಾವು ಸಂಪೂರ್ಣವಾಗಿ ವಿಭಿನ್ನವಾದ ಘಟನೆಯ ಬಗ್ಗೆ ಹೇಳುತ್ತೇವೆ. ಓರ್ವ ವ್ಯಕ್ತಿಯು ಅರಣ್ಯವನ್ನು ಸೃಷ್ಟಿಸಿದ್ದಾರೆ. ಅದು ಕೂಡ ಬಂಜರು ಭೂಮಿಯಲ್ಲಿ. ಖ್ಯಾತ ವನ್ಯಜೀವಿ ಸಂರಕ್ಷಕ ಮತ್ತು ಛಾಯಾಗ್ರಾಹಕ ಆದಿತ್ಯ ಸಿಂಗ್ ಮತ್ತು ಅವರ ಪತ್ನಿ ಪೂನಂ ಅವರು ಬರಡು ಭೂಮಿಯನ್ನು ಕಾಡನ್ನಾಗಿ ಪರಿವರ್ತಿಸಿದ್ದಾರೆ ಮತ್ತು ಅದು ಸಾಮಾನ್ಯ ಕಾಡಲ್ಲ. ಇಂದು ಅದು ಪ್ರಾಣಿಗಳ ಆವಾಸಸ್ಥಾನವಾಗಿದೆ. ಇಲ್ಲಿ ರಾಯಲ್ ಬೆಂಗಾಲ್ ಟೈಗರ್ ಹೆಚ್ಚಾಗಿದ್ದು, ಇದರಿಂದ ಈ ಕಾಡು ಎಷ್ಟು ದೊಡ್ಡದಾಗಿದೆ ಮತ್ತು ಹಸಿರಾಗಿದೆ ಎಂದು ನೀವು ಊಹಿಸಬಹುದು. ದಂಪತಿಗಳು 35 ಎಕರೆ ಬಂಜರು ಭೂಮಿಯನ್ನು ಅರಣ್ಯವನ್ನಾಗಿ ಮಾಡಿದ್ದಾರೆ. ಅದರಲ್ಲಿ ಇಂದು ಸಾವಿರಾರು ಪ್ರಾಣಿಗಳು ವಾಸಿಸುತ್ತವೆ.

ಆದರೆ ದುರ್ದೈವ 57 ವರ್ಷದ ಆದಿತ್ಯ ಸಿಂಗ್ ಇಂದು ಬೆಳಗ್ಗೆ ರಾಜಸ್ಥಾನದ ರಣಥಂಬೋರ್ ಹುಲಿ ಸಂರಕ್ಷಿತ ಪ್ರದೇಶದ ಹೊರವಲಯದಲ್ಲಿರುವ ತಮ್ಮ ಮನೆಯಲ್ಲಿ ನಿಧನರಾಗಿದ್ದಾರೆ. ಕೆಲವು ವಾರಗಳ ಹಿಂದೆ ಸಣ್ಣ ಹೃದಯಾಘಾತದ ನಂತರ ಆದಿತ್ಯ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಅದರಿಂದ ಅವರು ಚೇತರಿಸಿಕೊಳ್ಳುತ್ತಿದ್ದರು. ಆದರೆ ನಿನ್ನೆ ಎಲ್ಲರೊಂದಿಗೆ ಮಾತನಾಡುತ್ತಾ ಸಂತೋಷವಾಗಿದ್ದ ಅವರು ಇಂದು ಮುಂಜಾನೆ ನಿದ್ದೆಯಲ್ಲೇ ಸಾವನ್ನಪ್ಪಿದ್ದಾರೆ ಎಂದು ಕುಟುಂಬದ ಸ್ನೇಹಿತ ಧರ್ಮೇಂದ್ರ ಖಂಡಾಲ್ ತಿಳಿಸಿದ್ದಾರೆ.

ಆದಿತ್ಯ ಅವರು 1992ರ ಬ್ಯಾಚ್‌ನ ಯುಪಿಎಸ್‌ಸಿ ಸಿಎಸ್‌ಎಸ್ ಅಧಿಕಾರಿಯಾಗಿದ್ದರು. UPSC ಪರೀಕ್ಷೆಯಲ್ಲಿ ತೇರ್ಗಡೆಯಾಗುವುದು ಭಾರತದ ಸಾವಿರಾರು ಯುವಕರ ಕನಸಾಗಿದೆ. ಇದು ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿದೆ. ಅಂತಹ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಆದಿತ್ಯ ಅಧಿಕಾರಿಯಾದರು. ಆದರೆ ಅವರು ಒಂದು ವರ್ಷದ ನಂತರ ತಮ್ಮ ಕೆಲಸವನ್ನು ತೊರೆದರು. ಆ ಸಮಯದಲ್ಲಿ ಅವರು BBC ಗಾಗಿ ಸಾಕ್ಷ್ಯಚಿತ್ರದಲ್ಲಿ ಕೆಲಸ ಮಾಡುತ್ತಿದ್ದರು. ಅವರು ಎರಡು ಚಿತ್ರಗಳನ್ನು ಬ್ಯಾಕ್ ಟು ಬ್ಯಾಕ್ ಚಿತ್ರೀಕರಣ ಮಾಡಿದ್ದರು. ಅದಕ್ಕೆ ಸುಮಾರು 200 ದಿನಗಳನ್ನು ತೆಗೆದುಕೊಂಡಿತು. ಈ ಸಂದರ್ಭದಲ್ಲಿ, ಹೆಚ್ಚುತ್ತಿರುವ ಹುಲಿಗಳ ವಾಸಸ್ಥಾನಕ್ಕಾಗಿ ಮರುಭೂಮಿಯಲ್ಲಿ ಅರಣ್ಯ ಬೆಳೆಸುವ ನಿರ್ಧಾರ ಮಾಡಿದ್ದರು.

ರಣಥಂಬೋರ್ ಅರಣ್ಯದ ಫೋಟೋ
ಈ ಭೂಮಿ ಸಾಮಾನ್ಯ ಭೂಮಿಗಿಂತ ಅಗ್ಗವಾಗಿದೆ. ಆದ್ದರಿಂದ ಆದಿತ್ಯ ಅದನ್ನು ಖರೀದಿಸಿ ಅದರ ಮೇಲೆ ಕೆಲಸ ಮಾಡಲು ಪ್ರಾರಂಭಿಸಿದರು. ಕೆಲಸ ಬಿಟ್ಟು ದೆಹಲಿಯಿಂದ ಇಲ್ಲಿಗೆ ಶಿಫ್ಟ್ ಆಗಲು ಇದೇ ಕಾರಣ. ಆದಿತ್ಯ ಪ್ರಕಾರ, ಇನ್ನೂ ಕೆಲವು ಅಂಶಗಳೂ ಇದ್ದವು. 1998ರ ಆರಂಭದಲ್ಲಿ, ಆದಿತ್ಯ ತನ್ನ ಹೆಂಡತಿಯೊಂದಿಗೆ ರಣಥಂಬೋರ್‌ಗೆ ಸ್ಥಳಾಂತರಗೊಂಡರು. ಆ ಭೂಮಿಯನ್ನು ಹವಾಮಾನ ಬದಲಾವಣೆಯ ಗಡಿಯಾಗಿ ಅಭಿವೃದ್ಧಿಪಡಿಸುವುದು ಆದಿತ್ಯನ ಗುರಿಯಾಗಿತ್ತು. ಆ ಬಂಜರು ಭೂಮಿಯನ್ನು ನೀರಿನ ಮಟ್ಟ ಹೆಚ್ಚಿಸಿ ಕಾಡುಪ್ರಾಣಿಗಳು ವಾಸಿಸಲು ಅನುಕೂಲವಾಗುವಂತೆ ಮಾಡಬೇಕೆಂದುಕೊಂಡರು.

ಆರಂಭದಲ್ಲಿ ಹಲವು ಸಮಸ್ಯೆಗಳಿದ್ದವು
35 ಎಕರೆ ಭೂಮಿಯನ್ನು ಹಸಿರಾಗಿಸುವ ಈ ಪಯಣ ಅಷ್ಟೊಂದು ಸುಲಭವಾಗಿರಲಿಲ್ಲ ಎನ್ನುತ್ತಾರೆ ಆದಿತ್ಯ. ಈ ಸವಾಲನ್ನು ಜಯಿಸಲು ನನಗೆ ಮತ್ತು ನನ್ನ ಹೆಂಡತಿಗೆ ತುಂಬಾ ಕಷ್ಟವಾಗುತ್ತಿತ್ತು. ವಾಸ್ತವವಾಗಿ, ಅವರು ಅಲ್ಲಿ ಉತ್ತಮ ವಾತಾವರಣವನ್ನು ಕಂಡುಕೊಳ್ಳಲು ಸಾಧ್ಯವಾಗಲಿಲ್ಲ. ಅಲ್ಲಿನ ಭೂಮಿಯನ್ನು ಕೊಳ್ಳುವುದು ನಿಜಕ್ಕೂ ಸವಾಲಾಗಿತ್ತು ಏಕೆಂದರೆ ಹಾಗೆ ಮಾಡುವುದರಿಂದ ನಾನು ಈ ಭೂಮಿಯನ್ನು ಯಾವುದೋ ವ್ಯಾಪಾರ ಅಥವಾ ಹೋಟೆಲ್‌ಗಾಗಿ ಖರೀದಿಸುತ್ತಿದ್ದೇನೆ ಎಂಬ ಭಾವನೆ ಅಲ್ಲಿನ ಜನರ ಮನಸ್ಸಿನಲ್ಲಿ ಮೂಡುತ್ತದೆ.

ಕೆಲವು ತಿಂಗಳ ನಂತರ ಸಸ್ಯಗಳನ್ನು ಬೆಳೆಸುವಲ್ಲಿ ಯಶಸ್ಸು
ಆದಿತ್ಯ ಹಳ್ಳಿಯು ತನ್ನದೇ ಆದ ಸಾಮಾಜಿಕ ವಾತಾವರಣವನ್ನು ಹೊಂದಿದೆ ಎಂದು ಹೇಳುತ್ತಾರೆ. ಇದನ್ನು ಅರ್ಥಮಾಡಿಕೊಳ್ಳಲು, ಅವರು ಗ್ರಾಮದ ಕೆಲವು ಹಿರಿಯ ಗ್ರಾಮಸ್ಥರೊಂದಿಗೆ ಮಾತನಾಡಿದ್ದು, ಇದು ಅವರಿಗೆ ಮುಂದುವರಿಯಲು ಆತ್ಮವಿಶ್ವಾಸವನ್ನು ನೀಡಿತು. ಆರಂಭದಲ್ಲಿ ಗ್ರಾಮಸ್ಥರು ಕೂಡ ಇವರನ್ನು ನಂಬುತ್ತಿರಲಿಲ್ಲ. ಕ್ರಮೇಣ ಈತನ ಗುರಿ ಏನೆಂದು ನಂಬಿದ್ದರಿಂದ ಜಮೀನು ಖರೀದಿ ಸುಲಭವಾಯಿತು. ಆರಂಭದಲ್ಲಿ, ಆದಿತ್ಯ ಹಲವಾರು ತಿಂಗಳುಗಳ ಕಾಲ ನೀರು ಹಾಕುವ ಮೂಲಕ ಮಾತ್ರ ಭೂಮಿಯನ್ನು ಬಿಟ್ಟರು. ಹೀಗೆ ಸ್ವಲ್ಪ ಸಮಯದ ನಂತರ ಬರಡು ಭೂಮಿಯಲ್ಲಿ ಮರ-ಗಿಡಗಳು ಬೆಳೆಯತೊಡಗಿದವು ಆದರೆ ಆದಿತ್ಯ ಮತ್ತವನ ಹೆಂಡತಿಯ ಪಯಣ ಇಲ್ಲಿಗೇ ನಿಲ್ಲದೆ ಅದರಲ್ಲೇ ಕೆಲಸ ಮುಂದುವರೆಸಿದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com