ಅಂಕಿತ್ ಕೇಶ್ರಿ ಕುಟುಂಬಕ್ಕೆ ಸಹಾಯ ಮಾಡುತ್ತೇವೆ: ಗಂಭೀರ್

ಕ್ರಿಕೆಟ್ ಆಡುವಾಗ ಗಾಯವಾಗಿ ಮರಣವನ್ನಪ್ಪಿದ ಬಂಗಾಳದ ಯುವ ಕ್ರಿಕೆಟಿಗ ಅಂಕಿತ್ ಕೇಶ್ರಿ ಕುಟುಂಬಕ್ಕೆ ತಾವು ಎಲ್ಲ ರೀತಿಯ ಸಹಾಯ ಮಾಡುತ್ತೇವೆ ಎಂದು
ಗೌತಂ ಗಂಭೀರ್
ಗೌತಂ ಗಂಭೀರ್

ನವದೆಹಲಿ: ಕ್ರಿಕೆಟ್ ಆಡುವಾಗ ಗಾಯವಾಗಿ ಮರಣವನ್ನಪ್ಪಿದ ಬಂಗಾಳದ ಯುವ ಕ್ರಿಕೆಟಿಗ ಅಂಕಿತ್ ಕೇಶ್ರಿ ಕುಟುಂಬಕ್ಕೆ ತಾವು ಎಲ್ಲ ರೀತಿಯ ಸಹಾಯ ಮಾಡುತ್ತೇವೆ ಎಂದು ಐಪಿಎಲ್ ಪಂದ್ಯಾವಳಿಯ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಗೌತಂ ಗಂಭೀರ್ ಹೇಳಿದ್ದಾರೆ.

ಆಸ್ಟ್ರೇಲಿಯಾದ ಕ್ರಿಕೆಟಿಗ ಫಿಲಿಪ್ ಹ್ಯೂಸ್ ಕ್ರಿಕೆಟ್ ಆಡುತ್ತಿರುವಾಗ ತಲೆಗೆ ಬಾಲ್ ಬಿದ್ದು ಮರಣವನ್ನಪ್ಪಿದ್ದರು. ಈ ಸಾವು ಸಂಭವಿಸಿದ 5 ತಿಂಗಳಲ್ಲೇ ಇಂಥದ್ದೇ ಇನ್ನೊಂದು ಸಾವು ಸಂಭವಿಸಿದೆ.

ಕೇಶ್ರಿ ನಮ್ಮೊಂದಿಗೆ ಇಲ್ಲ ಎಂಬುದು ತುಂಬಾ ದುಃಖದ ವಿಷಯ. ಅವನ ಕುಟುಂಬ ಕಳೆದುಕೊಂಡಿರುವುದನ್ನು ನಾವು ಭರಿಸಲಾಗುವುದಿಲ್ಲ. ಆದರೆ ಕೆಕೆಆರ್ ತಂಡ ಕೇಶ್ರಿ ಕುಟುಂಬವನ್ನು ಭೇಟಿ ಮಾಡಿ ಅವರಿಗ ಬೇಕಾದ ಎಲ್ಲ ಸಹಾಯವನ್ನು ಮಾಡಿಕೊಡುವುದಾಗಿ ನಾನು ಭರವಸೆ ನೀಡುತ್ತೇನೆ ಎಂದು ಗೌತಂ ಗಂಭೀರ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com