ಕೊಲಂಬೊ: ಕರ್ನಾಟಕದ ಪ್ರತಿಭಾನ್ವಿತ ಆಟಗಾರ ಕರುಣ್ ನಾಯರ್ ಶ್ರೀಲಂಕಾ ವಿರುದ್ಧದ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆಡಲಿದ್ದಾರೆ ಎಂಬ ಸುಳಿವನ್ನು ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ತಿಳಿಸಿದ್ದಾರೆ.
ಎರಡನೇ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಕೊಹ್ಲಿ, ``ಈ ಪಿಚ್ನ ಅನುಗುಣಕ್ಕೆ ತಕ್ಕಂತೆ ತಂಡವನ್ನು ಸಜ್ಜುಗೊಳಿಸಬೇಕಿದೆ. ಆ ನಿಟ್ಟಿನಲ್ಲಿ ಕರುಣ್ ಇದಕ್ಕೆ ಸೂಕ್ತ ವ್ಯಕ್ತಿ. ಕೆ.ಎಲ್. ರಾಹುಲ್ ಜತೆಗೆ ಚೇತೇಶ್ವರ ಪೂಜಾರ ಇನ್ನಿಂಗ್ಸ್ ಆರಂಭಿಸಲಿದ್ದರೆ, ಮೂರನೇ ಕ್ರಮಾಂಕ ಕರುಣ್ ನಿಭಾಯಿಸಲಿದ್ದಾರೆ. ಅಜಿಂಕ್ಯ ರಹಾನೆ ಮೇಲಿನ ಯಾವುದೇ ಕ್ರಮಾಂಕದಲ್ಲಿ ಆಡುವಷ್ಟು ಶಕ್ತರಾಗಿದ್ದಾರೆ'' ಎಂದೂ ಕೊಹ್ಲಿ ಹೇಳಿದ್ದಾರೆ.
ಇತ್ತೀಚೆಗಷ್ಟೇ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ಎ ತಂಡಗಳ ಸರಣಿಯಲ್ಲಿ ಭಾರತ ಎ ತಂಡದ ಉಪ ನಾಕರಾಗಿದ್ದ ಕರುಣ್ ನಾಯರ್, ಹರಿಣಗಳ ವಿರುದ್ಧದ ಕಡೆಯ ಪಂದ್ಯದಲ್ಲಿ ಅಮೂಲ್ಯ ಶತಕ ದಾಖಲಿಸಿ ತಂಡ ಸೋಲಿನಿಂದ ಪಾರಾಗುವಂತೆ ನೋಡಿಕೊಂಡಿದ್ದರು. ಈದ ಟೀಂ ಇಂಡಿಯಾ ಪರ ಟೆಸ್ಟ್ ಗೆ ಪಾದಾರ್ಪಣೆ ಮಾಡಲು ಕಾತರರಾಗಿದ್ದಾರೆ.
Advertisement