ವಾಗ್ವಾದ ತರವಲ್ಲ: ಸುನಿಲ್ ಗವಾಸ್ಕರ್

ಪ್ರಸಕ್ತ ಟೆಸ್ಟ್ ಸರಣಿಯಲ್ಲಿ ಭಾರತ ಹಾಗೂ ಶ್ರೀಲಂಕಾ ಆಟಗಾರರ ನಡುವೆ ಮೈದಾನದಲ್ಲಿನ ವಾಗ್ವಾದ ಹಾಗೂ ಮಾತಿನ ಚಕಮಕಿಗಳು ಕ್ರೀಡೆಗೆ ನಕಾರಾತ್ಮಕ ಪ್ರಚಾರ ನೀಡುತ್ತಿವೆ ಎಂದು ಭಾರತದ ಮಾಜಿ ನಾಯಕ ಸುನಿಲ್ ಗಾವಸ್ಕರ್ ಅಭಿಪ್ರಾಯಪಟ್ಟಿದ್ದಾರೆ...
ಸುನಿಲ್ ಗಾವಸ್ಕರ್ (ಸಂಗ್ರಹ ಚಿತ್ರ)
ಸುನಿಲ್ ಗಾವಸ್ಕರ್ (ಸಂಗ್ರಹ ಚಿತ್ರ)

ಕೊಲಂಬೊ: ಪ್ರಸಕ್ತ ಟೆಸ್ಟ್ ಸರಣಿಯಲ್ಲಿ ಭಾರತ ಹಾಗೂ ಶ್ರೀಲಂಕಾ ಆಟಗಾರರ ನಡುವೆ ಮೈದಾನದಲ್ಲಿನ ವಾಗ್ವಾದ ಹಾಗೂ ಮಾತಿನ ಚಕಮಕಿಗಳು ಕ್ರೀಡೆಗೆ ನಕಾರಾತ್ಮಕ ಪ್ರಚಾರ ನೀಡುತ್ತಿವೆ ಎಂದು ಭಾರತದ ಮಾಜಿ ನಾಯಕ ಸುನಿಲ್ ಗಾವಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

``ಈ ರೀತಿಯಾದ ಘಟನೆಗಳನ್ನು ಯಾರೂ ನೋಡಲು ಇಚ್ಛಿಸುವುದಿಲ್ಲ. ಅಂತಾರಾಷ್ಟ್ರೀಯ ಆಟಗಾರರು ಯುವ ಪೀಳಿಗೆಗೆ ಮಾದರಿಯಾಗಿದ್ದು, ಅವರು ಪಂದ್ಯವನ್ನು ವೀಕ್ಷಿಸುತ್ತಿರುತ್ತಾರೆ. ಇದೊಂದು ಕ್ರೀಡೆಯಾಗಿದ್ದು, ಇದನ್ನು ಆನಂದಿಸಬೇಕು.ಪೋಷಕರು ತಮ್ಮ ಮಕ್ಕಳಿಗೆ ಈ ಕ್ರೀಡೆಯನ್ನು ಆಡಬೇಡ ಎಂಬ ಪರಿಸ್ಥಿತಿ ನಿರ್ಮಾಣವಾಗಬಾರದು. ಇನ್ನು ಸ್ಟುವರ್ಟ್ ಬಿನ್ನಿ ತಮ್ಮ ಹೊಡೆತವನ್ನು ಸರಿಯಾದ ರೀತಿಯಲ್ಲಿ ಆಡಬೇಕು'' ಎಂದೂ ಸಲಹೆ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com