ಮೇಳೈಸಿದ ಲೋಪ ದೋಷಗಳು: ಈವರೆಗೆ ಆಡಿರುವ ಮೂರೂ ಪಂದ್ಯಗಳಲ್ಲಿ ಲೋಪ ದೋಷಗಳಿಂದಲೇ ಭಾರತ ಮುಗ್ಗರಿಸಿದೆ. ರಕ್ಷಣಾ ವಿಭಾಗದಲ್ಲಿನ ಕೊರತೆಗಳು ಎದ್ದು ಕಾಣುತ್ತಿವೆ. ಇದರ ಜತೆಗೇ, ಭರವಸೆಯ ಆಟಗಾರರಾದ ಆಕಾಶ್ದೀಪ್ ಸಿಂಗ್, ರಮಣ್-ದೀಪ್ ಸಿಂಗ್, ಎಸ್.ವಿ. ಸುನಿಲ್, ತಲ್ವಿಂದರ್ ಸಿಂಗ್, ಮೊಹಮ್ಮದ್ ಅಮೀರ್ ಅವರಿಂದ ಈ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ಹೊರಹೊಮ್ಮಿಲ್ಲ. ತಂಡದ ವೈಫಲ್ಯಕ್ಕೆ ಇದೂ ಒಂದು ಪ್ರಮುಖ ಕಾರಣ. ಇದೇ ಲೋಪ ದೋಷಗಳು ಬ್ರಿಟನ್ ವಿರುದ್ಧದ ಪಂದ್ಯದಲ್ಲೂ ಪುನರಾವರ್ತನೆಯಾದಲ್ಲಿ ಭಾರತಕ್ಕೆ ಸೋಲು ಕಟ್ಟಿಟ್ಟ ಬುತ್ತಿ.