ಧ್ಯಾನ್‌ಚಂದ್‌ಗೆ ಮೊದಲು ಭಾರತರತ್ನ ಕೊಡಬೇಕಿತ್ತು: ಮಿಲ್ಕಾಸಿಂಗ್

ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ...
ಮಿಲ್ಕಾ ಸಿಂಗ್
ಮಿಲ್ಕಾ ಸಿಂಗ್
Updated on

ನವದೆಹಲಿ: ಹಾಕಿ ದಂತ ಕಥೆ ಧ್ಯಾನ್ ಚಂದ್ ಅವರಿಗೆ ಮೊದಲು ಭಾರತರತ್ನ ಪ್ರಶಸ್ತಿ ನೀಡಬೇಕಿತ್ತು ಎಂದು ಖ್ಯಾತ ಅಥ್ಲೀಟ್ ಮಿಲ್ಕಾ ಸಿಂಗ್ ಹೇಳಿದ್ದಾರೆ.

ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನ ಪ್ರಶಸ್ತಿಯನ್ನು ಕ್ರೀಡಾಳುಗಳ ಪೈಕಿ ಮೊದಲು ಧ್ಯಾನ್ ಚಂದ್ ಅವರಿಗೇ ನೀಡಬೇಕಿತ್ತು. ಈ ಗೌರವಕ್ಕೆ ಅವರೇ ಅರ್ಹ ವ್ಯಕ್ತಿ ಎಂದು ಮಿಲ್ಕಾ ಸಿಂಗ್ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ 'ಫ್ಲೈಯಿಂಗ್ ಸಿಖ್ ' ಎಂದೇ ಖ್ಯಾತರಾಗಿರುವ ಮಿಲ್ಕಾ, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್‌ಗೆ ಈ ಪ್ರಶಸ್ತಿಯನ್ನು ನೀಡುವ ಮೂಲಕ ಇನ್ನಿತರ ಕ್ರೀಡಾಪಟುಗಳಿಗೂ ಪ್ರಶಸ್ತಿ ನೀಡಿ ಗೌರವಿಸಲಿರುವ ಅವಕಾಶ ದಕ್ಕಿದಂತಾಗಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com