ಧ್ಯಾನ್‌ಚಂದ್‌ಗೆ ಮೊದಲು ಭಾರತರತ್ನ ಕೊಡಬೇಕಿತ್ತು: ಮಿಲ್ಕಾಸಿಂಗ್

ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ...
ಮಿಲ್ಕಾ ಸಿಂಗ್
ಮಿಲ್ಕಾ ಸಿಂಗ್

ನವದೆಹಲಿ: ಹಾಕಿ ದಂತ ಕಥೆ ಧ್ಯಾನ್ ಚಂದ್ ಅವರಿಗೆ ಮೊದಲು ಭಾರತರತ್ನ ಪ್ರಶಸ್ತಿ ನೀಡಬೇಕಿತ್ತು ಎಂದು ಖ್ಯಾತ ಅಥ್ಲೀಟ್ ಮಿಲ್ಕಾ ಸಿಂಗ್ ಹೇಳಿದ್ದಾರೆ.

ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನ ಪ್ರಶಸ್ತಿಯನ್ನು ಕ್ರೀಡಾಳುಗಳ ಪೈಕಿ ಮೊದಲು ಧ್ಯಾನ್ ಚಂದ್ ಅವರಿಗೇ ನೀಡಬೇಕಿತ್ತು. ಈ ಗೌರವಕ್ಕೆ ಅವರೇ ಅರ್ಹ ವ್ಯಕ್ತಿ ಎಂದು ಮಿಲ್ಕಾ ಸಿಂಗ್ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ 'ಫ್ಲೈಯಿಂಗ್ ಸಿಖ್ ' ಎಂದೇ ಖ್ಯಾತರಾಗಿರುವ ಮಿಲ್ಕಾ, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್‌ಗೆ ಈ ಪ್ರಶಸ್ತಿಯನ್ನು ನೀಡುವ ಮೂಲಕ ಇನ್ನಿತರ ಕ್ರೀಡಾಪಟುಗಳಿಗೂ ಪ್ರಶಸ್ತಿ ನೀಡಿ ಗೌರವಿಸಲಿರುವ ಅವಕಾಶ ದಕ್ಕಿದಂತಾಗಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com