ಬ್ರಿಸ್ಬೇನ್: ವಿಶ್ವಕಪ್ ಪಂದ್ಯಾಟ ಸನ್ನಿಹಿತವಾಗುತ್ತಿದ್ದರೂ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತೀಯ ಬೌಲರ್ಗಳ ಕಳಪೆ ಪ್ರದರ್ಶನದ ಬಗ್ಗೆ ಮಾಜಿ ನಾಯಕ ಸುನೀಲ್ ಗವಾಸ್ಕರ್ ಅಸಮಧಾನ ವ್ಯಕ್ತ ಪಡಿಸಿದ್ದಾರೆ.
ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 2-0 ಅಂತರದಲ್ಲಿ ಟೀಂ ಇಂಡಿಯಾ ಪರಾಭವಗೊಂಡಿದೆ. ಈ ಪಂದ್ಯಗಳಲ್ಲಿ 20 ವಿಕೆಟ್ ಪಡೆಯಲು ನಮ್ಮ ಬೌಲರ್ಗಳು ವಿಫಲರಾಗಿದ್ದಾರೆ. ಆದಾಗ್ಯೂ, ತ್ರಿಕೋನ ಸರಣಿಯಲ್ಲಿ 267 ರನ್ಗಳ ಗುರಿ ಮುಟ್ಟುವಲ್ಲಿಯೂ ನಾವು ಎಡವಿದ್ದೇವೆ ಎಂದು ತಂಡದ ಪ್ರದರ್ಶನದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಇಷ್ಟೊಂದು ಪಂದ್ಯಗಳನ್ನಾಡಿಯೂ ವಿದೇಶ ಪ್ರವಾಸದಿಂದ ನಮ್ಮ ಬೌಲರ್ಗಳು ಏನೂ ಕಲಿತಿಲ್ಲ. ಇದು ಚಿಂತೆಗೀಡು ಮಾಡಿದೆ. ವಿಶ್ವಕಪ್ ಸಮೀಪಿಸುತ್ತಿದೆ. ಹಾಲಿ ಚಾಂಪಿಯನ್ಗಳಾಗಿರುವ ನಾವು ಉತ್ತಮ ಪ್ರದರ್ಶನ ನೀಡಬೇಕಾಗಿದೆ ಎಂದು ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಗವಾಸ್ಕರ್ ಹೇಳಿದ್ದಾರೆ.
Advertisement