ರಣಜಿ: ಕೆಎಲ್ ರಾಹುಲ್ ತ್ರಿಶತಕ

ಕೆಎಲ್ ರಾಹುಲ್
ಕೆಎಲ್ ರಾಹುಲ್
Updated on

ಬೆಂಗಳೂರು: ಉತ್ತರಪ್ರದೇಶದ ವಿರುದ್ಧ ರಣಜಿ ಪಂದ್ಯದಲ್ಲಿ ಕರ್ನಾಟಕದ ಕೆ.ಎಲ್ ರಾಹುಲ್ ತ್ರಿಶತಕ ಸಿಡಿಸಿ ದಾಖಲೆ ಬರೆದಿದ್ದಾರೆ.

ತ್ರಿಶತಕ ಸಿಡಿಸುವ ಮೂಲಕ ಮುನ್ನೂರು ರನ್ ಗಡಿ ದಾಟಿದ ಪ್ರಪ್ರಥಮ ಕನ್ನಡಿಗ ಎಂಬ ಕೀರ್ತಿಗೆ ರಾಹುಲ್ ಪಾತ್ರರಾಗಿದ್ದಾರೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಉತ್ತರಪ್ರದೇಶದ ವಿರುದ್ಧದ ರಣಜಿ ಪಂದ್ಯದ ಎರಡನೇ ದಿನವಾದ ಇಂದು ರಾಹುಲ್ 422 ಎಸೆತಗಳಲ್ಲಿ 45 ಬೌಂಡರಿ ಹಾಗೂ 3 ಸಿಕ್ಸರ್ ಸಿಡಿಸಿ 317 ರನ್ ಗಳಿಸಿದ್ದಾರೆ. ರಣಜಿಯಲ್ಲಿ ಕರ್ನಾಟಕ 7 ವಿಕೆಟ್ ನಷ್ಟಕ್ಕೆ 678 ರನ್ ಗಳಿಸಿದೆ.

ಮೊದಲ ದಿನದ ಅಂತ್ಯಕ್ಕೆ ಕರ್ನಾಟಕ ತಂಡ 4 ವಿಕೆಟ್ ನಷ್ಟಕ್ಕೆ 326 ರನ್ ಗಳಿಸಿತ್ತು. 150 ರನ್ ಗಳಿಸಿದ್ದ ರಾಹುಲ್ ಇಂದು 317 ರನ್ ಗೆ ಔಟಾಗಿದ್ದಾರೆ.

ಅತಿ ಹೆಚ್ಚು ರನ್ ಗಳಿಸಿರುವ ಕರ್ನಾಟಕದ ಆಟಗಾರರು
ಕೆಎಲ್ ರಾಹುಲ್ 317
ಬ್ಯಾರಿಂಗ್ಟನ್ ರೋಲ್ಯಾಂಡ್ 283
ವಿ ಅರುಣ್ ರಾಜ 267
ಸಿಎಂ ಗೌತಮ್ 264 ಅಜೇಯ
ಕೆ ಜೆಸ್ವಂತ್ 259 ಅಜೇಯ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com