ನವದೆಹಲಿ: ಬುಧವಾರದಿಂದ ಜಪಾನ್ನ ಕೊಬೆಯಲ್ಲಿ ಶುರುವಾಗಲಿರುವ ಜಿಎಸಿ ಗ್ರೂಪ್ ವಲ್ರ್ಡ್ ಟೂರ್ ಜಪಾನ್ ಓಪನ್ ಟೇಬಲ್ ಟೆನಿಸ್ ಪಂದ್ಯಾವಳಿಯಲ್ಲಿ ಭಾಗವಹಿಸುವ ಸಲುವಾಗಿ ನಾಲ್ವರು ಆಟಗಾರರಿರುವ ಭಾರತ ತಂಡ ಇಂದು ಅತಿಮುಂಜಾನೆ ಜಪಾನ್ಗೆ ಪ್ರಯಾಣ ಬೆಳೆಸಿತು.
ದೇಶದ ಪ್ರಮುಖ ಟೇಬಲ್ ಟೆನಿಸ್ ಆಟಗಾರರ ಪೈಕಿ ಒಬ್ಬರಾಗಿರುವ ಸೌಮ್ಯಜಿತ್ ಘೋಷ್ ಅಲ್ಲದೆ, ದೇವೇಶ್ ಕರಿಯಾ, ಅಂಕಿತಾ ದಾಸ್ ಹಾಗೂ ಮೌಮಾ ದಾಸ್ ಅವರಿದ್ದ ತಂಡ ಕೋಚ್ ವಿಜಯಸಾರಥಿ ಶೇಷಾದ್ರಿ ಅವರೊಂದಿಗೆ ಚೆನ್ನೈನಿಂದ ವಿದೇಶಕ್ಕೆ ತೆರಳಿತು. ಜೂನ್ 28ರವರೆಗೆ ನಡೆಯಲಿರುವ ಸ್ಪರ್ಧಾವಳಿಯಲ್ಲಿ ಏಷ್ಯಾ ಹಾಗೂ ಕೆಲ ಯೂರೋಪ್ ಆಟಗಾರರು ಪ್ರಮುಖ ಆಕರ್ಷಣೆ ಎನಿಸಿದ್ದಾರೆ. ಈ ಪಂದ್ಯಾವಳಿಯ ನಂತರ ಜುಲೈ 1ರಿಂದ 5ರವರೆಗೆ ಇಂಚಾನ್ನಲ್ಲಿ ನಡೆಯಲಿರುವ ವಲ್ರ್ಡ್ ಟೂರ್ ಕೊರಿಯಾ ಓಪನ್ನಲ್ಲಿ ಇದೇ ಭಾರತ ತಂಡ ಸ್ಪರ್ಧಿಸಲಿದೆ.
Advertisement