ಚಂದ್ರಕಾಂತ್ ಮುಂಬೈ ಕೋಚ್

ಭಾರತ ತಂಡದ ಮಾಜಿ ವಿಕೆಟ್‍ಕೀಪರ್ ಚಂದ್ರಕಾಂತ್ ಪಂಡಿತ್ ಮಂಗಳವಾರ ಮುಂಬೈ ರಣಜಿ ತಂಡದ ನೂತನ ಕೋಚ್ ಆಗಿ ನಿಯುಕ್ತಿಯಾಗಿದ್ದಾರೆ...
ಚಂದ್ರಕಾಂತ್ ಪಂಡಿತ್
ಚಂದ್ರಕಾಂತ್ ಪಂಡಿತ್

ಮುಂಬೈ: ಭಾರತ ತಂಡದ ಮಾಜಿ ವಿಕೆಟ್‍ಕೀಪರ್ ಚಂದ್ರಕಾಂತ್ ಪಂಡಿತ್ ಮಂಗಳವಾರ ಮುಂಬೈ ರಣಜಿ ತಂಡದ ನೂತನ ಕೋಚ್ ಆಗಿ ನಿಯುಕ್ತಿಯಾಗಿದ್ದಾರೆ. ಮಾತ್ರವಲ್ಲದೆ, ಬಾಂದ್ರಾ ಕುರ್ಲಾ ಸಂಕೀರ್ಣದಲ್ಲಿನ ಮುಂಬೈ ಕ್ರಿಕೆಟ್ ಸಂಸ್ಥೆಯ ಒಳಾಂಗಣ ಕ್ರೀಡಾಂಗಣದ ಮುಖ್ಯ ತರಬೇತುದಾರರಾಗಿಯೂ ಆಯ್ಕೆಯಾಗಿದ್ದಾರೆ. ``ಚಂದು ಮಾರ್ಗದರ್ಶನದಲ್ಲಿ ಮುಂಬೈ ಅನೇಕ ಪ್ರಶಸ್ತಿಗಳನ್ನು ಗೆದ್ದಿದೆ. ಪ್ರವೀಣ್ ಆಮ್ರೆ ಮುಂಬೈ ತಂಡದ ಕೋಚ್ ಆಗಿ ಸಾರ್ಥಕ ಸೇವೆ ಸಲ್ಲಿಸಿದ್ದಾರೆ. ಆದರೆ ಈ ಋತುವಿನಲ್ಲಿ ಅವರು ತಂಡವನ್ನು ಮುನ್ನಡೆಸಲು ಸಾಧ್ಯವಿಲ್ಲವೆಂದು ತಿಳಿಸಿದ್ದರಿಂದ ಚಂದು ಅವರಿಗೆ ಜವಾಬ್ದಾರಿ ವಹಿಸಲಾಗಿದೆ'' ಎಂದು ಇತ್ತೀಚೆಗಷ್ಟೇ ಮುಂಬೈ ಕ್ರಿಕೆಟ್ ಸಂಸ್ಥೆ (ಎಂಸಿಎ)ಯ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ಭಾರತ ತಂಡದ ಮಾಜಿ ಕೋಚ್ ದಿಲೀಪ್ ವೆಂಗ್‍ಸರ್ಕಾರ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com