ವಿಜೇಂದರ್ ಸಿಂಗ್‌ಗೆ ಹರಿಯಾಣ ಪೊಲೀಸರ ಎಚ್ಚರಿಕೆ

ಅಮೆಚ್ಯೂರ್ ಬಾಕ್ಸಿಂಗ್‌ಗೆ ವಿದಾಯ ಘೋಷಿಸಿ ವೃತ್ತಿಪರ ಬಾಕ್ಸಿಂಗ್‌ಗೆ ಪಾದಾರ್ಪಣೆ ಮಾಡಲು ಮುಂದಾಗಿರುವ ಭಾರತದ ಹೆಸರಾಂತ ಬಾಕ್ಸರ್...
ವಿಜೇಂದರ್ ಸಿಂಗ್‌
ವಿಜೇಂದರ್ ಸಿಂಗ್‌

ಮುಂಬೈ: ಅಮೆಚ್ಯೂರ್ ಬಾಕ್ಸಿಂಗ್‌ಗೆ ವಿದಾಯ ಘೋಷಿಸಿ ವೃತ್ತಿಪರ ಬಾಕ್ಸಿಂಗ್‌ಗೆ ಪಾದಾರ್ಪಣೆ ಮಾಡಲು ಮುಂದಾಗಿರುವ ಭಾರತದ ಹೆಸರಾಂತ ಬಾಕ್ಸರ್ ವಿಜೇಂದರ್ ಸಿಂಗ್ ಅವರಿಗೆ ಹರಿಯಾಣ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

'ವಿಜೇಂದರ್ ಹರಿಯಾಣ ಸರ್ಕಾರದ ನೌಕರನಾಗಿದ್ದುಕೊಂಡು ಮತ್ತೊಂದು ವೃತ್ತಿಯನ್ನು ಆಯ್ದುಕೊಳ್ಳುವುದು ಕಾನೂನು ಬಾಹಿರ. ಅವರು ಸರ್ಕಾರದಿಂದ ಅನುಮತಿ ಪಡೆಯದೆ ಬೇರೆ ಸ್ಥಳದಲ್ಲಿ ಹೇಗೆ ಇನ್ನೊಂದು ಹುದ್ದೆಯನ್ನು ಆಯ್ದುಕೊಳ್ಳಲು ಸಾಧ್ಯ. ಒಂದೊಮ್ಮೆ ಹರಿಯಾಣ ಸರ್ಕಾರದ ಅನುಮತಿ ಪಡೆಯದೆ ಹೋದರೆ ಕಾನೂನು ರೀತಿ ಕ್ರಮ ಜರುಗಿಸುವುದು ಅನಿವಾರ್ಯವಾಗುತ್ತದೆ' ಎಂದು ಹರಿಯಾಣ ಹೆಚ್ಚುವರಿ ಡಿಜಿಪಿ ಕೆ.ಕೆ.ಶರ್ಮಾ ಅವರು ತಿಳಿಸಿದ್ದಾರೆ.

29 ವರ್ಷದ ವಿಜೇಂದರ್ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ತೋರಿದ ಸಾಧನೆಯಿಂದಾಗಿ ಈ ಹಿಂದಿನ ಭೂಪೀಂದರ್ ಸಿಂಗ್ ಹೂಡಾ ನೇತೃತ್ವದ ಹರಿಯಾಣ ಸರ್ಕಾರದಿಂದ ಉಪ ಪೊಲೀಸ್ ಆಯುಕ್ತರಾಗಿ ನೇಮಕಗೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com