ವೆಂಗ್‍ಸರ್ಕಾರ್‍ಗೆ ವಿವಾದ ಹಸ್ತಾಂತರ

ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಏಕದಿನ ಪಂದ್ಯಕ್ಕಾಗಿ ಸಿದ್ಧಪಡಿಸಲಾಗಿದ್ದ ಪಿಚ್ ಕುರಿತಂತೆ, ವಾಂಖೆಡೆಕ್ರೀಡಾಂಗಣದ ಕ್ಯುರೇಟರ್...ಸುಧೀರ್ ನಾಯಕ್
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಮುಂಬೈ: ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಏಕದಿನ ಪಂದ್ಯಕ್ಕಾಗಿ ಸಿದ್ಧಪಡಿಸಲಾಗಿದ್ದ ಪಿಚ್ ಕುರಿತಂತೆ, ವಾಂಖೆಡೆ ಕ್ರೀಡಾಂಗಣದ ಕ್ಯುರೇಟರ್ ಸುಧೀರ್ ನಾಯಕ್ ಹಾಗೂ ಟೀಂ ಇಂಡಿಯಾ ನಿರ್ದೇಶಕ ರವಿಶಾಸ್ತ್ರಿ ನಡುವಿನ ವಿವಾದವನ್ನು ಇತ್ಯರ್ಥಗೊಳಿಸಲು ಮಾಜಿ ಕ್ರಿಕೆಟಿಗ ಅವರಿಗೆ ಜವಾಬ್ದಾರಿ ವಹಿಸಿ, ಮುಂಬೈ ಕ್ರಿಕೆಟ್ ಸಂಸ್ಥೆ (ಎಂಸಿಎ) ಆದೇಶ ಹೊರಡಿಸಿದೆ.

ಪಿಚ್ ಕುರಿತಾಗಿ ತಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರೆಂದು ಸುಧೀರ್ ಇತ್ತೀಚೆಗೆ ಎಂಸಿಎಗೆ ದೂರು ಸಲ್ಲಿಸಿದ್ದರು. ಶುಕ್ರವಾರ ಸಭೆ ಸೇರಿದ್ದ ಎಂಸಿಎ ವ್ಯವಸ್ಥಾಪಕ ಮಂಡಳಿ ಸಭೆಯಲ್ಲಿ ಈ ದೂರಿನ ಬಗ್ಗೆ ಚರ್ಚಿಸಿದ ಸದಸ್ಯರು, ಈ ವಿವಾದ ಇತ್ಯರ್ಥಪಡಿಸುವ ಜವಾಬ್ದಾರಿಯನ್ನು ವೆಂಗ್‍ಸರ್ಕಾರ್ ಹೆಗಲಿಗೆ ವಹಿಸಿದ್ದಾರೆ.

ಬಿಸಿಸಿಐಗೂ ದೂರು:
ತಮ್ಮ ಹಾಗೂ ರವಿಶಾಸ್ತ್ರಿ ನಡುವಿನ ಜಗಳವನ್ನು ಸುಧೀರ್ ನಾಯಕ್, ಬಿಸಿಸಿಐ ಅಂಗಳಕ್ಕೂ ಕೊಂಡೊಯ್ದಿದ್ದಾರೆ. ಶಾಸ್ತ್ರಿ ವಿರುದ್ಧ ಬಿಸಿಸಿಐಗೆ ದೂರು ನೀಡಿರುವ ಅವರು, ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com