ನಾಲ್ಕರ ಘಟ್ಟಕ್ಕೆ ಸತೀಶ್ ಕುಮಾರ್

ಭಾರತದ ಬಾಕ್ಸರ್ ಸತೀಶ್ ಕುಮಾರ್ ಉತ್ತಮ ಪ್ರದರ್ಶನ ನೀಡುವ ಮೂಲಕ ಏಷ್ಯನ್ ಚಾಂಪಿಯನ್‍ಶಿಪ್‍ನ ಸೆಮಿಫೆೈನಲ್ ಸುತ್ತಿಗೆ ಪ್ರವೇಶಿಸಿದ್ದಾರೆ...
ಬಾಕ್ಸರ್ ಸತೀಶ್ ಕುಮಾರ್ (ಸಂಗ್ರಹಚಿತ್ರ)
ಬಾಕ್ಸರ್ ಸತೀಶ್ ಕುಮಾರ್ (ಸಂಗ್ರಹಚಿತ್ರ)

ಬ್ಯಾಂಕಾಕ್: ಭಾರತದ ಬಾಕ್ಸರ್ ಸತೀಶ್ ಕುಮಾರ್ ಉತ್ತಮ ಪ್ರದರ್ಶನ ನೀಡುವ ಮೂಲಕ ಏಷ್ಯನ್ ಚಾಂಪಿಯನ್‍ಶಿಪ್‍ನ ಸೆಮಿಫೆೈನಲ್ ಸುತ್ತಿಗೆ ಪ್ರವೇಶಿಸಿದ್ದಾರೆ.

ಇದರೊಂದಿಗೆ ವಿಶ್ವ ಚಾಂಪಿಯನ್‍ಶಿಪ್‍ಗೆ ಅರ್ಹತೆ ಪಡೆದುಕೊಂಡಿದ್ದಾರೆ. ಬುಧವಾರ ನಡೆದ ಪುರುಷರ 91+ ಕೆ.ಜಿ ವಿಭಾಗದ ಕ್ವಾರ್ಟರ್ಫೆೈನಲ್ ಪಂದ್ಯದಲ್ಲಿ ಸತೀಶ್ ಕುಮಾರ್, ತಮ್ಮ   ಪ್ರತಿಸ್ಪರ್ಧಿ ತಜಕಿಸ್ತಾನದ ಸಿಯೋವುಶ್ ಜುಖುರೋವ್ ಅವರನ್ನು ಮಣಿಸುವ ಮೂಲಕ ಅಂತಿಮ ನಾಲ್ಕರ ಘಟ್ಟಕ್ಕೆ ಲಗ್ಗೆ ಹಾಕಿದರು. ಸೆಮಿಫೆೈನಲ್ ತಲುಪುವುದರೊಂದಿಗೆ ಅವರು ಪದಕವನ್ನೂ ಖಚಿತಪಡಿಸಿಕೊಂಡಿದ್ದಾರೆ. ಇನ್ನು 52 ಕೆ.ಜಿ ವಿಭಾಗದಲ್ಲಿ ಮದನ್ ಲಾಲ್ ಹಾಗೂ 81 ಕೆ.ಜಿ ವಿಭಾಗದಲ್ಲಿ ಕುಲ್ದೀಪ್ ಸಿಂಗ್ ತಮ್ಮ ಪಂದ್ಯಗಳಲ್ಲಿ ಸೋಲನುಭವಿಸುವ ಮೂಲಕ ನಿರಾಸೆ  ಅನುಭವಿಸಿದರು.

ಭಾರತೀಯ ಆಟಗಾರನ ಆಕ್ರಮಣಕಾರಿ ಆಟದವನ್ನು ಎದುರಿಸಲಾಗದೇ ಸಿಯೋವುಶ್ ನಿಗದಿಗಿಂತ ಹೆಚ್ಚು ಬಾಗುತ್ತಿದ್ದರಿಂದ ಅಂಪೈರ್ ಗಳು ಎರಡು ಬಾರಿ ಎಚ್ಚರಿಕೆ ನೀಡಿದರು. ಅಂತಿಮವಾಗಿ  ಸತೀಶ್ ಕುಮಾರ್ ಅವರನ್ನು ತಾಂತ್ರಿಕ ಆಧಾರದ ಮೇಲೆ ಜಯಶಾಲಿ ಎಂದು ಘೋಷಿಸಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com