ಅಂತೆಯೇ ಈ ಅರ್ಜಿಯಲ್ಲಿ ಶ್ರೀನಿವಾಸನ್ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಮಾಲೀಕರಾಗಿದ್ದು, ಇದು ಅವರು ಹಿತಾಸಕ್ತಿ ಸಂಘರ್ಷದಲ್ಲಿ ಸಿಲುಕಿದ್ದಾರೆ ಎಂಬುದನ್ನು ಸ್ಪಷ್ಟೀಕರಿಸುತ್ತಿದೆ ಎಂದೂ ಹೇಳಲಾಗಿತ್ತು'' ಎಂಬ ಠಾಕೂರ್ ಅರ್ಜಿಯನ್ನು ತಾವು ಸಲ್ಲಿಸಿರುವ ಅರ್ಜಿ ಯಲ್ಲಿ ಉಲ್ಲೇಖಿಸಿರುವ ಶ್ರೀನಿ, ಠಾಕೂರ್ ಅವರ ಹೇಳಿಕೆ ಹಾಗೂ ವರದಿಯಲ್ಲವೂ 'ಸಂಪೂರ್ಣವಾಗಿ ಆಧಾರರಹಿತ'ವಾಗಿದೆ ಎಂದು ವಾದಿಸಿದ್ದಾರೆ. ಜತೆಗೆ, ಬಿಸಿಸಿಐ ಖಜಾಂಚಿ ಅನಿರುದ್ಧ್ ಚೌಧರಿ, ಬಿಸಿಸಿಐ ಉಪಾಧ್ಯಕ್ಷ ಟಿ.ಸಿ. ಮ್ಯಾಥ್ಯೂ ಹಾಗೂ ಕೇರಳ ಕ್ರಿಕೆಟ್ ಸಂಸ್ಥೆ ಜಂಟಿ ಕಾರ್ಯದರ್ಶಿ ಜಯೇಶ್ ಜಾರ್ಜ್ ಅವರ ಅಫಿಡ ವಿಟ್ ಗಳನ್ನೂ ನ್ಯಾಯಾಲಯಕ್ಕೆ ನೀಡಿದ್ದಾರೆ. ಈ ಅಫಿಡವಿಟ್ಗಳು 'ಶ್ರೀನಿವಾಸನ್ ಬಿಸಿಸಿಐ ನಡೆಸುವ ಎಲ್ಲ ಸಭೆಗಳಲ್ಲಿಯೂ ಭಾಗವಹಿಸುತ್ತಿದ್ದರಲ್ಲದೆ, ಅವರ ಉಪಸ್ಥಿತಿ ಯನ್ನು ಯಾರೊಬ್ಬರೂ ಪ್ರಶ್ನಿಸುತ್ತಿರಲಿಲ್ಲ. ಅಂತೆಯೇ ಈ ಸಭೆಯನ್ನೇನೂ ವಿಡಿಯೇ ಚಿತ್ರೀಕರಿಸಿರಲಿಲ್ಲ'' ಎಂದು ತಿಳಿಸಿದ್ದಾರೆ.