ಜೆಎನ್ಯು ವಿವಾದಕ್ಕೆ ಸಂಬಂಧಪಟ್ಟಂತೆ ದೇಶಪ್ರೇಮ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ದೇಶದ ಜನರ ಒಂದೊಂದು ನಿಲುವುಗಳು ಚರ್ಚಾಸ್ಪದವಾಗುತ್ತಲೇ ಇರುತ್ತವೆ. ಈ ಹಿಂದೆ ಗೌತಂ ಗಂಭೀರ್, ಕುಸ್ತಿಪಟು ಯೋಗೇಶ್ವರ್ ದತ್ತಾ ಮತ್ತು ಬಾಕ್ಸರ್ ವಿಜೇಂದರ್ ಸಿಂಗ್ ಅವರು ದೇಶಪ್ರೇಮವನ್ನು ವ್ಯಕ್ತ ಪಡಿಸಿ ತಮ್ಮ ಅಭಿಪ್ರಾಯಗಳನ್ನು ಹೇಳಿದ್ದರು.