ಒಂದು ಫೋಟೋದಲ್ಲಿ ಗುರ್ ಮೆಹರ್ ಅವರು ತಮ್ಮ ತಂದೆ ಸಾವಿಗೆ ಪಾಕಿಸ್ತಾನವಲ್ಲ, ಯುದ್ಧವೇ ಕಾರಣ ಎಂಬ ಫೋಟೋ ಇದೆ. ಮತ್ತೊಂದು ಭಾಗದಲ್ಲಿ ಹಿಟ್ಲರ್ ಇದ್ದು ಆ ಫೋಟೋದಲ್ಲಿ ನಾನು ಯಹೂದಿಗಳನ್ನು ಸಾಯಿಸಲಿಲ್ಲ, ವಿಷ ಅನಿಲ ಸಾಯಿಸಿತ್ತು. ಮೂರನೇ ಫೋಟೋದಲ್ಲಿ ಒಸಾಮಾ ಬಿನ್ ಲಾಡನ್ ಇದ್ದು, ನಾನು ಜನರನ್ನು ಸಾಯಿಸಲಿಲ್ಲ. ಬಾಂಬ್ ಗಳು ಸಾಯಿಸಿತ್ತು. ನಾಲ್ಕನೇ ಫೋಟೋದಲ್ಲಿ ಸಲ್ಮಾನ್ ಖಾನ್ ಅವರ ಹತ್ಯೆ ಮಾಡಿದ್ದ ಕೃಷ್ಣಮೃಗ ಇದ್ದು, ಸಲ್ಮಾನ್ ಬಾಯ್ ನನ್ನನ್ನು ಸಾಯಿಸಲಿಲ್ಲ, ಗನ್ ನಲ್ಲಿದ್ದ ಗುಂಡು ನನ್ನ ಹತ್ಯೆ ಮಾಡಿತ್ತು ಎಂದು ಬರೆಯಲಾಗಿದೆ. ಈ ಫೋಟೋವನ್ನು ಟ್ವಿಟರ್ ನಲ್ಲಿ ಹಾಕುವ ಮೂಲಕ ಗುರ್'ಮೆಹರ್ ಕೌರ್ ಅವರ ಪೋಸ್ಟ್ ಗೆ ಯೋಗೇಶ್ವರ್ ದತ್ ಅವರು ವಿರೋಧ ವ್ಯಕ್ತಪಡಿಸಿದ್ದಾರೆ.