"ನಾನು ಹೊಂದಿರುವ ಕೌಶಲ್ಯವನ್ನು ಯುವಪೀಳಿಗೆ, ವಿದ್ಯಾರ್ಥಿಗಳಿಗೆ ಕಲಿಸುವಂತಹ ಸಂಸ್ಥೆಯನ್ನು ಸ್ಥಾಪಿಸುವುದು ನನ್ನ ಗುರಿ. ಅವರು ಸಾಮಾನ್ಯ ಪಠ್ಯಕ್ರಮದಿಂದ ಹೊರತಾದ ಏನನ್ನಾದರೂ ಕಲಿಯಬಹುದಾಗಿದೆ. ರಾಷ್ಟ್ರಪತಿಗಳ ಗೌರವವನ್ನು ಹೊರತುಪಡಿಸಿದರೆ ಸರ್ಕಾರದಿಂದ ನನಗೆ ಯಾವುದೇ ನಿರೀಕ್ಷಿತ ಬೆಂಬಲ ಸಿಗಲಿಲ್ಲ. ಇದೇಕೆ ಹೀಗಾಗಿದೆ ಎನ್ನುವುದನ್ನು ನಾನು ಹೇಳಲಾರೆ. ಆದರೆ ನನ್ನ ಪೋಷಕರು ಎಂದಿಗೂ ನನ್ನ ಬೆಂಬಲಕ್ಕಿದ್ದಾರೆ. ಈ ಕ್ಷೇತ್ರಕ್ಕೆ ಆಗಮಿಸಲು ಇಚ್ಚಿಸುವವರು ಯಾರೇ ಆದರೂ ನೀವೇ ನಂಬಿಕೆಯಿಂದ ಮುಂದುವರಿಯಿರಿ. ಆಗ ನಿಮಗೆ ತಾನೇತಾನಾಗಿ ಬೆಂಬಲ ಸಿಗುತ್ತದೆ. " ವೈಷ್ಣವಿ ಹೇಳಿದ್ದಾರೆ.