ಧಾರವಾಡ: ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಡ್ರೀಮ್ ವರ್ಲ್ಡ್ ಮಾರ್ಷಲ್ ಆರ್ಟ್ ಆಯೋಜಿಸಿದ್ದ ೬ನೇ ಅಖಿಲ ಭಾರತ ಓಪನ್ ಕರಾಟೆ ಚಾಂಪಿಯನ್ಶಿಪ್ ನಲ್ಲಿ ಧಾರವಾಡದ ಅಹನಾ ಪರಾಂಜಪೆ ಅವರು ಪ್ರಥಮ ಸ್ಥಾನ ಗಳಿಸಿದ್ದಾರೆ.
ಇತ್ತೀಚಿಗೆ ಗಂಗಾವತಿಯ ಸಿ.ಬಿ.ಎಸ್ ಕಲ್ಯಾಣ ಮಂಟಪದಲ್ಲಿ ನಡೆದ ಅಖಿಲ ಭಾರತ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಧಾರವಾಡದ ಕೆಲಗೇರಿಯ ಕೆಇ ಬೋರ್ಡ್ಸ್ ಆಂಗ್ಲ ಮಾಧ್ಯಮ ಶಾಲೆಯ ಏಳನೇ ತರಗತಿ ವಿದ್ಯಾರ್ಥಿನಿ ಅಹನಾ ಪರಾಂಜಪೆ ಅವರು ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.
ಈ ಚಾಂಪಿಯನ್ ಶಿಪ್ ನಲ್ಲಿ ೬೦೦ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ರಾಜ್ಯದ ವಿವಿಧ ಜಿಲ್ಲೆಯ ವಿವಿಧ ತಾಲೂಕಿನ ಕ್ರೀಡಾಪಟುಗಳು ಭಾಗವಹಿಸಿದ್ದರು.
ಈ ಸಾಧನೆಗಾಗಿ ಕೆಇ ಬೋರ್ಡಿನ ಕಾರ್ಯಾಧ್ಯಕ್ಷ ಶ್ರೀಕಾಂತ್ ಪಾಟೀಲ್, ಕಾರ್ಯದರ್ಶಿ ಡಿಎಸ್ ರಾಜಪುರೋಹಿತ, ಪ್ರಾಂಶುಪಾಲೆ ಪಲ್ಲವಿ ಆಕಳವಾಡಿ, ದೈಹಿಕ ಶಿಕ್ಷಕ ಮೃತ್ಯಂಜಯ ಅಗಡಿ ಸೇರಿದಂತೆ ಹಲವು ಶಿಕ್ಷಕರು ಅಹನಾ ಅವರನ್ನು ಅಭಿನಂದಿಸಿದ್ದಾರೆ.
Advertisement