ಬೆಂಗಳೂರು ಬ್ಲಾಸ್ಟ್: ಮಾನವೀಯತೆ ಮೆರೆದೆ ಆಟೋ ಚಾಲಕನ ಕಂಬನಿ

ಬೆಂಗಳೂರಿನ ಚರ್ಚ್ ಸ್ಟ್ರೀಟ್ ನಲ್ಲಿ
ಆಟೋ ಚಾಲಕ ನರಸಿಂಹ
ಆಟೋ ಚಾಲಕ ನರಸಿಂಹ
Updated on

ಬೆಂಗಳೂರು: ಬೆಂಗಳೂರಿನ ಚರ್ಚ್ ಸ್ಟ್ರೀಟ್ ನಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಮೃತಪಟ್ಟ ಚೆನ್ನೈ ಮೂಲದ ಮಹಿಳೆ ಭವಾನಿ(38) ಅವರನ್ನು ತಮ್ಮ ಆಟೋದಲ್ಲಿ ಮಲ್ಯ ಆಸ್ಪತ್ರೆಗೆ ಸೇರಿಸಿದ್ದ, ಆಟೋ ಚಾಲಕ ನರಸಿಂಹ ಕಂಬನಿ ಮಿಡಿದಿದ್ದಾರೆ.

ಚರ್ಚ್ ಸ್ಟ್ರೀಟ್ ನಲ್ಲಿ ಚಲಿಸುತ್ತಿದ್ದಾಗ ಗಾಯಗೊಂಡು ಬಿದ್ದಿದ್ದ ಈ ಮಹಿಳೆಯನ್ನು ತನ್ನ ಆಟೋದಲ್ಲಿ ಮಲ್ಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಮಾನವೀಯತೆ ಮೆರೆದಿದ್ದರೂ, ವಿಧಿಯ ಆಟವೇ ಬೇರೆಯಾಗಿತ್ತು. "ಇನ್ನೂ ವೇಗವಾಗಿ ಓಡುವ ಗಾಡಿ ನನ್ನದಾಗಿದ್ದರೆ, ಟ್ರಾಫಿಕ್ ಇಲ್ಲದೆ ಹೋಗಿದ್ದರೆ ಬಹುಷಃ ಆ ಮಹಿಳೆ ಉಳಿಯುತ್ತಿದ್ದರೇನೆ. ಅವರು ನನ್ನ ಸಂಬಂಧಿಕರೇನೂ ಅಲ್ಲ. ಆದರೆ ಅವರ ಮೃತ ಪಟ್ಟ ವಿಷಯ ತಿಳಿದು ನನಗೆ ತೀವ್ರ ನೋವುಂಟಾಗಿದೆ" ಎಂದಿದ್ದಾರೆ ಬೆಂಗಳೂರಿನ ರಾಜಾಜಿನಗರದ ಆಟೋ ಚಾಲಕ ನರಸಿಂಹ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com