ಬೆಂಗಳೂರು ಬ್ಲಾಸ್ಟ್: ಮಾನವೀಯತೆ ಮೆರೆದೆ ಆಟೋ ಚಾಲಕನ ಕಂಬನಿ

ಬೆಂಗಳೂರಿನ ಚರ್ಚ್ ಸ್ಟ್ರೀಟ್ ನಲ್ಲಿ
ಆಟೋ ಚಾಲಕ ನರಸಿಂಹ
ಆಟೋ ಚಾಲಕ ನರಸಿಂಹ

ಬೆಂಗಳೂರು: ಬೆಂಗಳೂರಿನ ಚರ್ಚ್ ಸ್ಟ್ರೀಟ್ ನಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಮೃತಪಟ್ಟ ಚೆನ್ನೈ ಮೂಲದ ಮಹಿಳೆ ಭವಾನಿ(38) ಅವರನ್ನು ತಮ್ಮ ಆಟೋದಲ್ಲಿ ಮಲ್ಯ ಆಸ್ಪತ್ರೆಗೆ ಸೇರಿಸಿದ್ದ, ಆಟೋ ಚಾಲಕ ನರಸಿಂಹ ಕಂಬನಿ ಮಿಡಿದಿದ್ದಾರೆ.

ಚರ್ಚ್ ಸ್ಟ್ರೀಟ್ ನಲ್ಲಿ ಚಲಿಸುತ್ತಿದ್ದಾಗ ಗಾಯಗೊಂಡು ಬಿದ್ದಿದ್ದ ಈ ಮಹಿಳೆಯನ್ನು ತನ್ನ ಆಟೋದಲ್ಲಿ ಮಲ್ಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಮಾನವೀಯತೆ ಮೆರೆದಿದ್ದರೂ, ವಿಧಿಯ ಆಟವೇ ಬೇರೆಯಾಗಿತ್ತು. "ಇನ್ನೂ ವೇಗವಾಗಿ ಓಡುವ ಗಾಡಿ ನನ್ನದಾಗಿದ್ದರೆ, ಟ್ರಾಫಿಕ್ ಇಲ್ಲದೆ ಹೋಗಿದ್ದರೆ ಬಹುಷಃ ಆ ಮಹಿಳೆ ಉಳಿಯುತ್ತಿದ್ದರೇನೆ. ಅವರು ನನ್ನ ಸಂಬಂಧಿಕರೇನೂ ಅಲ್ಲ. ಆದರೆ ಅವರ ಮೃತ ಪಟ್ಟ ವಿಷಯ ತಿಳಿದು ನನಗೆ ತೀವ್ರ ನೋವುಂಟಾಗಿದೆ" ಎಂದಿದ್ದಾರೆ ಬೆಂಗಳೂರಿನ ರಾಜಾಜಿನಗರದ ಆಟೋ ಚಾಲಕ ನರಸಿಂಹ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com