ಮಂಗಳೂರು: ಸಿದ್ಧರಾಮಯ್ಯ ಮತ್ತು ಜಾರ್ಜ್ ಅವರ ಪುತ್ರಿಯರ ಮೇಲೆ ಅತ್ಯಾಚಾರವಾದರೆ ಸರ್ಕಾರ ಸುಮ್ಮನಿರುತ್ತಾ? ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ಮುಖಂಡ ಈಶ್ವರಪ್ಪ ಅವರಿಗೆ ಮಂಗಳೂರು ಎಂಎಲ್ಸಿ ಐವಾನ್ ಡಿಸೋಜಾ ತಿರುಗೇಟು ನೀಡಿ ಹೊಸ ವಿವಾದಕ್ಕೆ ಸಿಲುಕಿಕೊಂಡಿದ್ದಾರೆ.
ಈಶ್ವರಪ್ಪ ಅವರ ಹೇಳಿಕೆಯನ್ನು ಖಂಡಿಸಿದ ಐವಾನ್, ಈಶ್ವರಪ್ಪ ಪತ್ನಿ ಮೇಲೆ ರೇಪ್ ಮಾಡಿದ್ರೆ ಹೇಗಿರುತ್ತೆ? ಈ ರೀತಿ ಹೇಳಿಕೆ ನೀಡಿದ್ದರೆ ಈಶ್ವರಪ್ಪ ಪ್ರತಿಕ್ರಿಯೆ ಹೇಗಿರುತ್ತಿತ್ತು? ಎಂದು ಪ್ರಶ್ನಿಸಿದ್ದಾರೆ.
ಅದೇ ವೇಳೆ ಈಶ್ವರಪ್ಪ ತಮ್ಮ ಹೇಳಿಕೆಯನ್ನು ವಾಪಾಸ್ ಪಡೆಯಬೇಕು ಮತ್ತು ಬಹಿರಂಗವಾಗಿ ಕ್ಷಮೆಯಾಚಿಸಬೇಕು . ಇನ್ನು ಮುಂದೆ ಅವರು ನಾಲಗೆ ಬಿಗಿ ಹಿಡಿದು ಮಾತನಾಡಲಿ ಎಂದಿದ್ದಾರೆ ಐವಾನ್ ಡಿಸೋಜಾ.
Advertisement