ನವದೆಹಲಿ: ಗೃಹ ಸಚಿವ ರಾಜ್ನಾಥ್ ಸಿಂಗ್ ಭಾರತದ ಮೇಲೆ ಯಾವುದೇ ಕ್ಷಣ ದಾಳಿಯಾಗಬಹುದು ಈ ಬಗ್ಗೆ ನಾವು ಎಚ್ಚರಿಕೆಯಿಂದಿರಬೇಕು ಎಂದು ಹೇಳುತ್ತಿದ್ದರೆ, ಇತ್ತ ಸಿಬಿಐ ಮುಖ್ಯಸ್ಥ ನಿದ್ದೆ ಮಾಡುತ್ತಿದ್ದರು!
ಭಾರತದ ಪೊಲೀಸ್ ಇಲಾಖೆ, ರಕ್ಷಣಾದಳ ಮತ್ತು ತನಿಖಾ ದಳ ಎಲ್ಲವೂ ಸೇರಿರುವ ರಾಷ್ಟ್ರೀಯ ಭದ್ರತಾ ಸಭೆಯವನ್ನುದ್ದೇಶಿಸಿ ರಾಜ್ನಾಥ್ ಸಿಂಗ್ ಅವರು ಆಂತರಿಕ ಭದ್ರತೆಯ ಬಗ್ಗೆ ಮಾತನಾಡುತ್ತಿದ್ದರೆ, ಸಭಾವೃಂದದಲ್ಲಿ ಕುಳಿತಿದ್ದ ಸಿಬಿಐ ನಿರ್ದೇಶಕ ರಂಜಿತ್ ಸಿನ್ಹಾ ಅವರು ನಿದ್ದೆ ಮಾಡುತ್ತಿರುವುದು ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.
ಗೃಹ ಸಚಿವರು ಇಷ್ಟೊಂದು ಗಂಭೀರ ವಿಷಯದ ಬಗ್ಗೆ ಮಾತನಾಡುತ್ತಿದ್ದರೆ, ರಾಷ್ಟ್ರೀಯ ತನಿಖಾ ದಳದ ಮುಖ್ಯಸ್ಥ ನಿದ್ದೆಗೆ ಜಾರಿರುವುದು ಚರ್ಚಾಸ್ಪದ ವಿಷಯವಾಗಿಯೇ ಮಾರ್ಪಟ್ಟಿದೆ.
ರಂಜಿತ್ ಸಿನ್ಹಾ ಅವರು ಡಿಸೆಂಬರ್ 2ನೇ ತಾರೀಖಿಗೆ ವೃತ್ತಿ ಜೀವನಕ್ಕೆ ವಿದಾಯ ಹೇಳಲಿದ್ದು, ಸದ್ಯ ಅವರ ನಿದ್ದೆ ಹೆಚ್ಚು ಸುದ್ದಿಯಾಗಿದೆ.
Advertisement