ಬೆಂಗಳೂರು: ಐ ಎ ಎಸ್ ಅಧಿಕಾರಿ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿರುವ ಸಿಬಿಐ, ಡಿ ಕೆ ರವಿ ಅವರ ಮಾವ ರಾಜಕೀಯ ನಾಯಕ ಹನುಮಂತರಾಯಪ್ಪ ಅವರ ಮನೆಗೆ ಶುಕ್ರವಾರ ಭೇಟಿ ನೀಡಿ ಸಿಸಿಟಿವಿ ದೃಶ್ಯಾವಳಿಗಳನ್ನು ವಶಪಡಿಸಿಕೊಂಡಿದ್ದಾರೆ.
ಸಿಬಿಐನ ವಿಶೇಷ ತನಿಖಾ ತಂಡ ಹನುಮಂತರಾಯಪ್ಪನವರೊಂದಿಗೆ ಮಾತುಕತೆ ನಡೆಸಿದ್ದರು ಯಾವುದೇ ಅಧಿಕೃತ ತನಿಖೆ ನಡೆಸಿಲ್ಲ. "ಸಿಬಿಐ ಅಧಿಕಾರಿಗಳು ಸಿಸಿಟಿವಿ ದೃಶ್ಯಾವಳಿಗಳನ್ನು ತೆಗೆದುಕೊಳ್ಳುವ ಮೊದಲು ನನ್ನ ಜೊತೆ ಸಾಮಾನ್ಯವಾಗಿ ಮಾತನಾಡಿದರು. ರವಿ ಅವರ ಸಾವಿನ ಎರಡು ದಿನ ಮುಂಚಿತವಾದ ಸಿಸಿಟಿವಿ ದೃಶ್ಯಾವಳಿಗಳನ್ನು ಸಿಐಡಿ ಅಧಿಕಾರಿಗಳು ಬೇಕಂತಲೇ ಅಳಿಸಿಹಾಕಿದ್ದಾರೆ ಎಂದು ಕೂಡ ನಾನು ಅವರಿಗೆ ತಿಳಿಸಿದೆ. ಅಳಿಸಿಹಾಕಿರುವ ದೃಶ್ಯಾವಳಿಗಳನ್ನು ತಜ್ಞರ ಸಹಾಯದೊಂದಿಗೆ ಮತ್ತೆ ಪಡೆಯುತ್ತೇವೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ" ಎಂದು ಹನುಮಂತರಾಯಪ್ಪ ಹೇಳಿದ್ದಾರೆ,
ರವಿ ಅವರ ಸಾವಿಗೂ ಮುಂಚಿನ ಚಲನವಲನಗಳನ್ನು ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಹಾಗೇಯೆ ಡಿ ಕೆ ರವಿ ಅವರ ಫೋನ್ ಕಾಲ್ ವಿವರಗಳನ್ನು ಅವರು ಪರಿಶೀಲಿಸುತ್ತಿದ್ದು, ನಂತರ ಕುಟುಂಬ ಸದಸ್ಯರನ್ನು ಪ್ರಶ್ನಿಸಲಾಗುವುದು ಎಂದಿದ್ದಾರೆ. ಮನೆ, ಕಚೇರಿ ಹಾಗೂ ಡಿ ಕೆ ರವಿ ಭೇಟಿ ನೀಡಿದ್ದ ಇತರ ಸ್ಥಳಗಳಿಂದ ಇತರ ಸಾಕ್ಷ್ಯಾಧಾರಗಳನ್ನು ಕೂಡ ಸಂಗ್ರಹಿಸುತ್ತಿದ್ದಾರೆ.
Advertisement