ಹಿಂಸಾಚಾರಕ್ಕೆ ತಿರುಗಿದ ಪಟೇಲ್ ಮೀಸಲಾತಿ ರ್ಯಾಲಿ; ಸೂರತ್, ಮೆಹ್ಸಾನದಲ್ಲಿ ಕರ್ಫ್ಯೂ

ಪಟೇಲ್ ಸಮುದಾಯಕ್ಕೆ ಮೀಸಲಾತಿ ಕೋರಿ ರ್ಯಾಲಿ ನಡೆಸುತ್ತಿದ್ದ ಸಮುದಾಯದ ಮುಖಂಡ ೨೨ ವರ್ಷದ ಹಾರ್ದಿಕ್ ಪಟೇಲ್ ನನ್ನು ಪೊಲೀಸರು ಸ್ವಲ್ಪ
ಗುಜರಾತ್ ನಲ್ಲಿ ಕರ್ಫ್ಯೂ ವಿಧಿಸಿದ ಕ್ಷಣಗಳು
ಗುಜರಾತ್ ನಲ್ಲಿ ಕರ್ಫ್ಯೂ ವಿಧಿಸಿದ ಕ್ಷಣಗಳು
Updated on

ಅಹಮದಾಬಾದ್: ಪಟೇಲ್ ಸಮುದಾಯಕ್ಕೆ ಮೀಸಲಾತಿ ಕೋರಿ ರ್ಯಾಲಿ ನಡೆಸುತ್ತಿದ್ದ ಸಮುದಾಯದ ಮುಖಂಡ ೨೨ ವರ್ಷದ ಹಾರ್ದಿಕ್ ಪಟೇಲ್ ನನ್ನು ಪೊಲೀಸರು ಸ್ವಲ್ಪ ಕಾಲದವರೆಗೆ ಬಂಧಿಸಿದ ಕಾರಣ ಜನ ಕಲ್ಲೆಸೆತ, ಧ್ವಂಸ ಇನ್ನಿತರ ಹಿಂಸೆಗೆ ತಿರುಗಿದ ಕಾರಣ ಉತ್ತರ ಗುಜರಾತ್ ನ ಮೂರು ಪಟ್ಟಣಗಳಲ್ಲಿ ಹಾಗೂ ಸೂರತ್ ನ ಕೆಲವು ಭಾಗಗಳಲ್ಲಿ ಕರ್ಫ್ಯೂ ವಿಧಿಸಲಾಗಿತ್ತು.

ಪಟೇಲ್ ಬಂಧನದ ಸುದ್ದಿ ಹರಡುತ್ತಿದ್ದಂತೆ ಅಹಮದಾಬಾದಿನಲ್ಲಿ ಹಿಂಸೆಗೆ ತಿರುಗಿದ ಪ್ರತಿಭಟನೆ ನಂತರ ಸೂರತ್, ಮೆಹ್ಸಾನ, ರಾಜಕೋಟ್ ಮತ್ತು ರಾಜ್ಯದ ಇನ್ನಿತರ ಭಾಗಗಳಿಗೂ ಹಬ್ಬಿತು. ನಂತರ ಪಟೇಲ್ ನನ್ನು ಬಿಡುಗಡೆ ಮಾಡಲಾಗಿದೆ.

ಅಹಮದಾಬಾದಿನಲ್ಲಿ ಬಸ್ಸುಗಳಿಗೆ ಪೋಲಿಸ್ ಚೌಕಿಗಳಿಗೆ ಬೆಂಕಿ ಹಚ್ಚಲಾಗಿದ್ದು, ಗುಜರಾತಿನ ಹಲವು ಭಾಗಗಳಲ್ಲಿ ಕಲ್ಲೆಸೆತದ ವರದಿಯಾಗಿದೆ. ಪೊಲೀಸರು ಗುಂಪನ್ನು ಚದುರಿಸಲು ಲಾಠಿ ಚಾರ್ಜ್ ಮತ್ತು ಆಶ್ರುವಾಯುವನ್ನು ಸಿಡಿಸಿದ್ದಾರೆ.

ರಾಜಕೋಟ್ ನಲ್ಲಿ ಕೇಂದ್ರ ಕೃಷಿ ಸಚಿವಾಲಯದ ರಾಜ್ಯ ಸಚಿವ ಮೋಹನ್ ಕುಂದಾರಿಯಾ ಅವರ ಎರಡು ಕಚೇರಿಗಳನ್ನು ಧ್ವಂಸಗೊಳಿಸಿದ್ದಾರೆ. ಅಲ್ಲದೆ ಎಲ್ಲಾ ಬಿ ಆರ್ ಟಿ ಎಸ್ ಬಸ್ ನಿಲ್ದಾಣಗಳನ್ನು ಕೂಡ ಧ್ವಂಸಗೊಳಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಗಳಿಗೆ ಜನರು ಅಡ್ಡಗಟ್ಟಿರುವ ವರದಿಗಳು ಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com