ತಮಿಳುನಾಡಿನಲ್ಲಿ ಜಲ ಪ್ರಳಯ: ಜೆಡಿಎಸ್‌ನಿಂದ ರು.1 ಕೋಟಿ ನೆರವು

ಕುಂಭದ್ರೋಣ ಮಳೆಯಿಂದ ಉಂಟಾಗಿರುವ ಜಲ ಪ್ರಳಯದಿಂದ ತತ್ತರಿಸಿರುವ ತಮಿಳುನಾಡಿಗೆ ಜೆಡಿಎಸ್ ಪಕ್ಷದಿಂದ ಒಂದು ಕೋಟಿ...
ಜೆಡಿಎಸ್ ವರಿಷ್ಠ ದೇವೇಗೌಡ
ಜೆಡಿಎಸ್ ವರಿಷ್ಠ ದೇವೇಗೌಡ

ಬೆಂಗಳೂರು: ಕುಂಭದ್ರೋಣ ಮಳೆಯಿಂದ ಉಂಟಾಗಿರುವ ಜಲ ಪ್ರಳಯದಿಂದ ತತ್ತರಿಸಿರುವ ತಮಿಳುನಾಡಿಗೆ ಜೆಡಿಎಸ್ ಪಕ್ಷದಿಂದ ಒಂದು ಕೋಟಿ ರುಪಾಯಿ ನೆರವು ನೀಡಲು ನಿರ್ಧರಿಸಿದೆ.

ಇಂದು ಬೆಂಗಳೂರಿನಲ್ಲಿ ನಡೆದ ಪಕ್ಷದ ರಾಷ್ಟ್ರೀಯ ಕಾರ್ಯಕಾರಣಿಯಲ್ಲಿ ಜಲ ಪ್ರಳಯದಿಂದ ತತ್ತರಿಸಿರುವ ತಮಿಳುನಾಡು ಪರಿಹಾರ ಕಾರ್ಯಕ್ಕೆ ನೆರವಾಗಲು 1 ಕೋಟಿ ರುಪಾಯಿ ನೀಡಲು ನಿರ್ಧರಿಸಲಾಯಿತು ಎಂದು ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಶ್ ಅಲಿ ಅವರು ತಿಳಿಸಿದ್ದಾರೆ.

ವಾಯುಭಾರ ಕುಸಿತದಿಂದಾಗಿ ಚೆನ್ನೈನಲ್ಲಿ ಕುಂಭದ್ರೋಣ ಮಳೆಯಾಗುತ್ತಿದೆ. ಕಳೆದ 1 ತಿಂಗಳಿನಿಂದ ಸುರಿಯುತ್ತಿರುವ ಭಾರೀ ಮಳೆಗೆ ತತ್ತರಿಸಿದ್ದ ಚೆನ್ನೈನಲ್ಲಿ ಮತ್ತೆ ಮಳೆಯಾಗುತ್ತಿದ್ದು, ನಗರವೆಲ್ಲಾ ಸಂಪೂರ್ಣ ಜಲಮಯವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com