ಕಾರ್ಪೊರೇಟರ್​ ಪುತ್ರನಿಂದ ಮೂವರಿಗೆ ಚೂರಿ ಇರಿತ

ತನ್ನನ್ನು ಗುರಾಯಿಸಿದರು ಎಂಬ ಕಾರಣಕ್ಕೆ ಶಿವಾಜಿನಗರ ಕಾರ್ಪೋರೇಟರ್ ಫರೀದಾ ಪುತ್ರ ಜಮಾಮ್ ಮೂವರಿಗೆ ಚೂರಿಯಿಂದ ಇರಿದಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ...
ಕಾರ್ಪೋರೇಟರ್ ಮಗ
ಕಾರ್ಪೋರೇಟರ್ ಮಗ
Updated on

ಬೆಂಗಳೂರು: ತನ್ನನ್ನು ಗುರಾಯಿಸಿದರು ಎಂಬ ಕಾರಣಕ್ಕೆ ಶಿವಾಜಿನಗರ ಕಾರ್ಪೋರೇಟರ್ ಫರೀದಾ ಪುತ್ರ ಜಮಾಮ್ ಮೂವರಿಗೆ ಚೂರಿಯಿಂದ ಇರಿದಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಕಳೆದ ನವೆಂಬರ್ 29 ರಂದು ಶಿವಾಜಿನಗರದ ಸವೇರಾ ಹೋಟೆಲ್ ಬಳಿ ಟೀ ಕುಡಿಯಲು ಬಂದಾಗ ಗುಂಪೊಂದು ಜಮಾಮ್ ನನ್ನ ಗುರಾಯಿಸಿದ್ದಾರೆ. ಇದರಿಂದ ಜಮಾಮ್ ಸ್ನೇಹಿತರ ಜೊತೆಗೂಡಿ ಮೂವರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ.

ಹಲ್ಲೆಗೊಳಗಾದ ರಾಹುಲ್, ದಿಲೀಪ್ ಮತ್ತು ವಿನೋದ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ರಾಹುಲ್ ಎಂಬಾತನ ಸ್ಥಿತಿ ಗಂಭೀರವಾಗಿದೆ.

ಪ್ರಕರಣ ದಾಖಲಿಸಿಕೊಂಡಿದ್ದ ಶಿವಾಜಿನಗರ ಪೊಲೀಸರು ನೂರ್ ಎಂಬಾತನನ್ನ ಬಂಧಿಸಿ ವಿಚಾರಣೆ ನಡೆಸಿದ್ದಾರೆ. ತಲೆ ಮರೆಸಿಕೊಂಡಿರುವ ಕಾಪೋರೇಟರ್ ಪುತ್ರ ಜಮಾಮ್​ಗಾಗಿ ಹುಡುಕಾಟ ನಡೆಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com