ಎಂದಿಗೂ ಕೆಲಸ ಮಾಡಲು ಇಚ್ಛಿಸದವರು ಸರ್ಕಾರಿ ಕೆಲಸ ಅರಸುತ್ತಾರೆ: ವಸುಂಧರಾ ರಾಜೆ

ಸ್ವ ಉದ್ಯೋಗ ಮತ್ತು ಸಣ್ಣ ವ್ಯವಹಾರದತ್ತ ಮುಖ ಮಾಡಲು ಯುವಕರಿಗೆ ಕರೆ ಕೊಟ್ಟಿರುವ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ ಅವರು ಕೆಲಸ ಮಾಡಲು ಇಚ್ಛಿಸದವರಶ್ಟೇ
ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ
ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ
Updated on

ಕೋಟಾ: ಸ್ವ ಉದ್ಯೋಗ ಮತ್ತು ಸಣ್ಣ ವ್ಯವಹಾರದತ್ತ ಮುಖ ಮಾಡಲು ಯುವಕರಿಗೆ ಕರೆ ಕೊಟ್ಟಿರುವ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ ಅವರು ಕೆಲಸ ಮಾಡಲು ಇಚ್ಛಿಸದವರಶ್ಟೇ ಸರ್ಕಾರಿ ಕೆಲಸಗಳನ್ನು ಹುಡುಕುತ್ತಾರೆ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.

"ಭಾರತದಲ್ಲಿ ಬಿಟ್ಟರೆ ವಿಶ್ವದಲ್ಲಿ ಇನ್ನೆಲ್ಲೂ ಸರ್ಕಾರಿ ಕೆಲಸಗಳಿಗೆ ಜನ ಹಪಾಹಪಿಸುವುದಿಲ್ಲ" ಎಂದಿರುವ ರಾಜೆ ಯುವಕರಿಗೆ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸೇರುವಂತೆ ಕರೆ ಕೊಟ್ಟಿದ್ದಾರೆ.

"ಯಾರಿಗೆ ಕೆಲಸ ಮಾಡಲು ಇಷ್ಟವಿಲ್ಲವೋ ಅವರಷ್ಟೇ ಸರ್ಕಾರಿ ಕೆಲಸಗಳನ್ನು ಹುಡುಕುತ್ತಾರೆ" ಎಂದು ಜಲವರ್ ನಲ್ಲಿ ಐ ಟಿ ಐ ವಿದ್ಯಾರ್ಥಿಗಳನ್ನುದ್ದೇಶಿಸಿ ವ್ಯಂಗ್ಯಭರಿತ ಮಾತುಗಳನ್ನಾಡಿದ್ದಾರೆ.

ಸ್ವ-ಉದ್ಯೋಗ ಮತ್ತು ಸಣ್ಣ ವ್ಯವಹಾರಗಳಿಂದ ತಮಗೂ ಕೆಲಸ ಸಿಗುವುದಲ್ಲದೆ ಮೂರು ನಾಲ್ಕು ಇತರರ ಜೀವನಕ್ಕೂ ಆಧಾರವಾಗುತ್ತದೆ ಎಂದು ಕೂಡ ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com