ಬಿಹಾರ ಮಂತ್ರಿಮಂಡಲ ಸಭೆ ಇಂದು, ವಿಧಾನಸಭೆ ವಿಸರ್ಜನೆ ಶಿಫಾರಸ್ಸಿಗೆ ಮಾಂಝಿ ಸಿದ್ಧ

ವಿರುದ್ಧ ಕ್ಯಾಂಪಿನ ಇಬ್ಬರು ಮಂತ್ರಿಗಳನ್ನು ರದ್ದು ಮಾಡಿರುವ ಬಿಹಾರದ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ
ಜಿತನ್ ರಾಮ್ ಮಾಂಝಿ
ಜಿತನ್ ರಾಮ್ ಮಾಂಝಿ
Updated on

ಅಪ್ಡೇಟ್: ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಇಂದು ಕರೆದಿದ್ದ ಮಂತ್ರಿಮಂಡಲದ ಸಭೆಯಲ್ಲಿ ೨೮ ಮಂತ್ರಿಗಳಲ್ಲಿ ೭ ಜನ ವಿಧಾನಸಭೆಯ ವಿಸರ್ಜನೆಯನ್ನು ಬೆಂಬಲಿಸಿದ್ದು ಇನ್ನುಳಿದ ನಿತೀಶ್ ಕುಮಾರ್ ಬಣದ ಬೆಂಬಲಿಗರು ಸಭೆಯಿಂದ ಹೊರನಡೆದಿದ್ದಾರೆ. ಇದರ ಹೊರತಾಗಿಯೂ ಮಾಂಝಿ ರಾಜ್ಯಪಾಲರನ್ನು ಭೇಟಿ ಮಾಡಿ ವಿಧಾನಸಭೆ ವಿಸರ್ಜನೆಗೆ ಶಿಫಾರಸ್ಸು ಮಾಡಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ಪಾಟ್ನಾ
: ವಿರುದ್ಧ ಕ್ಯಾಂಪಿನ ಇಬ್ಬರು ಮಂತ್ರಿಗಳನ್ನು ರದ್ದು ಮಾಡಿರುವ ಬಿಹಾರದ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಇಂದು ಮಂತ್ರಿಮಂಡಲದ ಸಭೆ ಕರೆದಿದ್ದು ರಾಜ್ಯದ ವಿಧಾನಸಭೆಯನ್ನು ವಿಸರ್ಜಿಸಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಈ ಸಭೆಯನ್ನು ಮಧ್ಯಾಹ್ನ ೨ ಘಂಟೆಗೆ ಕರೆಯಲಾಗಿದೆ.

ಇದಕ್ಕೂ ಮುಂಚೆ ಜೆಡಿಯು ಪಕ್ಷದ ಅಧ್ಯಕ್ಷ ಶರದ್ ಯಾದವ್ ಎಲ್ಲ ಶಾಸಕರ ಸಭೆಯನ್ನು ೪ ಘಂಟೆಗೆ ನಡೆಸುವುದಾಗಿ ಘೋಷಿಸಿದ್ದರು. ಆ ಸಭೆಯಲ್ಲಿ ಮುಖ್ಯಮಂತ್ರಿಯವರನ್ನು ಬದಲಿಸಬಹುದೆಂದು ಊಹಿಸಲಾಗಿತ್ತು. ಈಗ ಮುಖ್ಯಮಂತ್ರಿಗಳು ಅದಕ್ಕೂ ಮುಂಚಿತವಾಗಿ ಸಭೆ ಕರೆದಿರುವುದು ರಾಜಕೀಯ ಪಂಡಿತರ ಕುತೂಹಲ ಕೆರಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com