ಗುಜರಾತ್ ಗಲಭೆ ವರದಿ ಕೂಡಲೆ ಮಂಡಿಸಲು ಕಾಂಗ್ರೆಸ್ ಆಗ್ರಹ

೨೦೦೨ರ ಗುಜರಾತ್ ಗಲಭೆಯ ಬಗ್ಗೆ ತನಿಖೆ ನಡೆಸಿ ವರದಿ ಸಿದ್ಧಪಡಿಸಿರುವ ನ್ಯಾಯಾಧೀಶ ನಾನಾವತಿ ಆಯೋಗದ ಅಂತಿಮ ವರದಿಯನ್ನು ಈಗ
ಗೋಧ್ರಾ ಗಲಭೆಯ ಸಂಗ್ರಹ ಚಿತ್ರ
ಗೋಧ್ರಾ ಗಲಭೆಯ ಸಂಗ್ರಹ ಚಿತ್ರ
Updated on

ಅಹಮದಾಬಾದ್: ೨೦೦೨ರ ಗುಜರಾತ್ ಗಲಭೆಯ ಬಗ್ಗೆ ತನಿಖೆ ನಡೆಸಿ ವರದಿ ಸಿದ್ಧಪಡಿಸಿರುವ ನ್ಯಾಯಾಧೀಶ ನಾನಾವತಿ ಆಯೋಗದ ಅಂತಿಮ ವರದಿಯನ್ನು ಈಗ ನಡೆಯುತ್ತಿರುವ ವಿಧಾನ ಸಭಾ ಅಧಿವೇಶನದಲ್ಲಿ ಮಂಡಿಸುವುದಕ್ಕೆ ಗುಜರಾತಿನ ಬಿಜೆಪಿ ಸರ್ಕಾರ ವಿಳಂಬ ಮಾಡುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್, ಕೂಡಲೆ ವರದಿ ಮಂಡಿಸುವಂತೆ ಆಗ್ರಹಿಸಿ ಸ್ಪೀಕರ್ ಅವರಿಗೆ ಮನವಿ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ.

ಅಧಿವೇಶನದ ಕೊನೆಯ ದಿನ ವರದಿಯನ್ನು ಮಂಡಿಸಿ, ಅದರ ಬಗ್ಗೆ ಚರ್ಚೆಯನ್ನು ತಳ್ಳಿ ಹಾಕಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಹಿರಿಯ ಕಾಂಗ್ರೆಸ್ ಶಾಶಕ ಶೈಲೇಶ್ ಪರ್ಮಾರ್ ಆರೋಪಿಸಿದ್ದಾರೆ.

"ಬಿಜೆಪಿ ಸರ್ಕಾರ ಈ ವರದಿಯನ್ನು ಕೊನೆಯ ದಿನವೇ ಮಂಡಿಸುವುದು ಎಂಬುದ ನಮಗೆ ೧೦೦% ಖಾತ್ರಿಯಾಗಿದೆ. ಆದುದರಿಂದ ಇದರ ಬಗೆಗಿನ ಚರ್ಚೆಯನ್ನು ತಪ್ಪಿಸುವ ಹುನ್ನಾರ. ಸಿಎಜಿ ವರದಿಯ ಜೊತೆಯೂ ಇದೆ ತಂತ್ರ ಬಳಸಿದ್ದರು" ಎಂದಿದ್ದಾರೆ.

ಬಹುತೇಕ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ್ದ ೧೦೦೦ ಕ್ಕೂ ಹೆಚ್ಚು ಜನರನ್ನು ಹತ್ಯೆಗೈದ ಗೋಧ್ರಾ ನಂತರದ ೨೦೦೨ರ ಗಲಭೆಯನ್ನು ನಾನಾವತಿ ಆಯೋಗ ತನಿಖೆ ಮಾಡಿತ್ತು. ಈ ಸಮಿತಿ ಕಳೆದ ವರ್ಷ ನವೆಂಬರ್ ೧೮ ರಂದು ಎರಡನೆ ಮತ್ತು ಅಂತಿಮ ವರದಿಯನ್ನು ಗುಜರಾತ್ ಮುಖ್ಯಮಂತ್ರಿ ಆನಂದಿಬೇನ್ ಪಟೇಲ್ ಆವರಿಗೆ ಸಲ್ಲಿಸಿತ್ತು. ನಂತರ ನಡೆಯುತ್ತಿರುವ ಮೊದಲ ವಿಧಾನಸಭಾ ಅಧಿವೇಶನ ಇದು.

೨೦೦೮ ರಲ್ಲಿ ಸಲಿಸಿದ್ದ ಸಮಿತಿಯ ಮೊದಲ ವರದಿಯಲ್ಲಿ ಗೋಧ್ರಾದಲ್ಲಿ ರೈಲನ್ನು ಸುಟ್ಟಿದ್ದು ಪೂರ್ವ ನಿಯೋಜಿತ ಕೃತ್ಯ ಅಪಘಾತವಲ್ಲ ಎಂದಿದ್ದಲ್ಲದೆ ನರೇಂದ್ರ ಮೋದಿ ಮತ್ತು ಅವರ ಮಂತ್ರಿಗಳನ್ನು ಆರೋಪಮುಕ್ತಗೊಳಿಸಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com