ಮುಂಬೈ: ಮುಂಬೈನ ಸ್ಲಂ ಪ್ರದೇಶದಲ್ಲಿ ಅಡುಗೆ ಅನಿಲ ಸಿಲಿಂಡರ್ ಒಂದು ಸ್ಫೋಟಗೊಂಡು ಕುಟುಂಬದ ನಾಲ್ಕು ಜನ ಮೃತಪಟ್ಟಿದ್ದು, ಮೂವರಿಗೆ ಗಾಯಗೊಂಡ ಘಟನೆ ಗುರುವಾರ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೂರ್ವ ಸಾಂತಾಕ್ರೂಜ್ ನ ಮಣಿಲಾಲ್ ನ ಗೋಲಿಬಾರ್ ಸ್ಲಂ ಪ್ರದೇಶದಲ್ಲಿ ಈ ಸ್ಫೋಟ ನಡೆದಿದೆ. ಮನೆಯೊಡತಿ ಸಾಯಿಕುಮಾರಿ ಸುಮಾರು ೧೧ ಘಂಟೆ ಬೆಳಗ್ಗೆ ಸಿಲಿಂಡರ್ ಬದಲಿಸುವ ವೇಳೆಯಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ೯೦% ಸುಟ್ಟ ಗಾಯಗೊಳಿಂದಿಗೆ ಆಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೃತಪಟ್ಟವರನ್ನು ರಾಜದೇವ್ ದೀಕ್ಷಿತ್(೫೦), ಕಪಿಲ್ ದೀಕ್ಷಿತ್ (೪೦), ರಾಜೇಂದ್ರ ದೀಕ್ಷಿತ್ (೩೦) ಮತ್ತು ಯಶವಂತ್ ದೀಕ್ಷಿತ್ (೧೮) ಎಂದು ಗುರುತಿಸಲಾಗಿದೆ.
ಗಾಯಗೊಂಡವರು ಸಾಯಿಕುಮಾರಿ ದೀಕ್ಷಿತ್ (೪೦), ಶೋಭಾ ರಾಜೇಂದ್ರ ದೀಕ್ಷಿತ್ (೩೫) ಮತ್ತು ಮೀರಾ ಉಪಾಧ್ಯಾಯ (೪೦) ಎಂದು ಗುರುತಿಸಲಾಗಿದ್ದು ಅವರುಗಳನ್ನು ವಿ ಎನ್ ದೇಸಾಯಿ ಆಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಲಾಗಿದೆ.
Advertisement