ಗೋವಾ ಹುಸಿ ಭಯೋತ್ಪಾದನೆ ಕರೆ; ನೇಪಾಳಿ ಬಂಧನ
ಪಣಜಿ: ಏಳು ಜನ ಭಯೋತ್ಪಾದಕರು ಗೋವಾಗೆ ನುಸುಳಿದ್ದು ಭಯೋತ್ಪಾದಕ ಕೃತ್ಯಗಳನ್ನು ನಡೆಸಲಿದ್ದಾರೆ ಎಂದು ತಡರಾತ್ರಿಯಲ್ಲಿ ಮದ್ಯ ಸೇವಿಸಿ ಕರೆ ಮಾಡಿದ್ದ ೪೦ ವರ್ಷದ ನೇಪಾಳಿಯೊಬ್ಬನನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬುಧವಾರ ಮಧ್ಯರಾತ್ರಿ ೧೨ ಘಂಟೆಗೆ ಪೊಲೀಸ್ ನಿಯಂತ್ರಣ ಕೊಠಡಿಗೆ ನೀಮ್ ಬಹದೂರ್ ಎಂಬುವನು ಕರೆ ಮಾಡಿದ್ದ ಎಂದು ಉತ್ತರ ಗೋವಾದ ಪೊಲೀಸ್ ಮಹಾನಿರ್ದೇಶಕ ಉಮೇಶ್ ಗೋವಾಂಕರ್ ತಿಳಿಸಿದ್ದಾರೆ.
"ಭಯಭೀತಿ ಸೃಷ್ಟಿಸಲು ಈ ಆರೋಪಿ, ಏಳು ಜನ ಭಯೋತ್ಪಾದಕರು ಗೋವಾಗೆ ನುಸುಳಿದ್ದಾರೆ ಎಂದು ಹೇಳಿ ಫೋನ್ ಕಟ್ ಮಾಡಿದ್ದ. ನಂತರ ಫೋನ್ ಸ್ವಿಚ್ ಆಫ್ ಮಾಡಿದ್ದ. ಗುರುವಾರ ಬೆಳಗ್ಗೆ ಮತ್ತೆ ಫೋನ್ ಚಾಲನೆ ಮಾಡಿಡಾಗ ಅವನ ಸುಳಿವಿನ್ನು ಬೆನ್ನಟ್ಟಿ ಕೋರ್ಟಾಲಿಮ್ ಗ್ರಾಮದಲ್ಲಿ ಅವನನ್ನು ಬಂಧಿಸಲಾಗಿದೆ" ಎಮು ಗೋವಾಂಕರ್ ತಿಳಿಸಿದ್ದಾರೆ.
ಈ ಕರೆ ಮಾಡುವಾಗ ತಾನು ಮದ್ಯ ಸೇವಿಸಿದ್ದಾಗಿ ಆರೋಪಿ ಬಹದ್ದೂರ್ ಒಪ್ಪಿಕೊಂಡಿದ್ದು ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ ಎಂದು ಗೋವಾಂಕರ್ ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ