ಬಿಹಾರದಲ್ಲಿ ಆನೆ ದಾಳಿ: ಮೃತರ ಸಂಖ್ಯೆ ೪ಕ್ಕೆ ಏರಿಕೆ

ಬಿಹಾರದ ಸೀತಾಮರ್ಹಿ ಜಿಲ್ಲೆಯಲ್ಲಿ ಕಾಡಾನೆಯೊಂದು ನಡೆಸಿದ ದಾಳಿಯಲ್ಲಿ ಇನ್ನಿಬ್ಬರು ಮೃತಪಟ್ಟಿದ್ದು ಈಗ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಪಾಟ್ನಾ: ಬಿಹಾರದ ಸೀತಾಮರ್ಹಿ ಜಿಲ್ಲೆಯಲ್ಲಿ ಕಾಡಾನೆಯೊಂದು ನಡೆಸಿದ ದಾಳಿಯಲ್ಲಿ ಇನ್ನಿಬ್ಬರು ಮೃತಪಟ್ಟಿದ್ದು ಈಗ ಮೃತರ ಸಂಖ್ಯೆ ೪ ಕ್ಕೆ ಏರಿದೆ.

ಸೀತಾಮರ್ಹಿಯ ಹಳ್ಳಿಗಾಡಿನ ಪ್ರದೇಶದಲ್ಲಿ ಕಾಡಾನೆಯೊಂದು ಎಗ್ಗಿಲ್ಲದೆ ಜನರ ಮೇಲೆ ನುಗ್ಗಿದ ಕಾರಣ ಮಂಗಳವಾರ ಇಬ್ಬರು ಮೃತಪಟ್ಟು ಮೂವರು ಗಾಯಗೊಂಡಿದ್ದರು. ಗಾಯಗೊಂಡಿದ್ದ ಇಬ್ಬರು ಆಸ್ಪತ್ರೆಯಲ್ಲಿ ಬುಧವಾರ ಸಾವನ್ನಪಿದ್ದಾರೆ.  

ಅರಣ್ಯಾಧಿಕಾರಿಗಳಿಗೆ ಆನೆಯನ್ನು ಹಿಡಿಯಲು ಸಾಧ್ಯವಾಗದೆ ಹೋಗಿರುವುದರಿಂದ ಹಳ್ಳಿಗಾಡಿನ ಜನರಲ್ಲಿ ಭೀತಿ ಹುಟ್ಟಿಸಿದೆ.

ಸಿತಾಮಾರ್ಹಿ ಕಾಡಿನ ಅರಣ್ಯಾಧಿಕಾರಿ ಶಶಿ ಶೇಖರ್ ತಿಳಿಸುವಂತೆ "ನಮ್ಮಲ್ಲಿನ ಸಿಬ್ಬಂದಿಯ ಕೊರತೆಯಿಂದ ಆನೆಯನ್ನು ಹಿಡಿಯಲಾಗಿಲ್ಲ. ಹೆಚ್ಚಿನ ಸಿಬ್ಬಂದಿಗೆ ಪಾಟ್ನಾದ ಅರಣ್ಯ ಇಲಾಖೆಯವರಿಗೆ ಮನವಿ ಮಾಡಿದ್ದೇವೆ" ಎಂದಿದ್ದಾರೆ.

ಮುಜ್ಜಪ್ಫರಪುರ್ ಜಿಲ್ಲೆಯ ಆಸುಪಾಸಿನ ಹಳ್ಳಿಗಳಲ್ಲಿ ಆನೆ ಕಂಡೂಬಂದಿರುವುದಾಗಿ ಕೆಲವು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com