ಎಎಪಿ ವಾಸ್ತವ ಕಲ್ಪನೆಯ ಕೆಟ್ಟ ತೋರೆಣಿಕೆ: ಯೋಗೇಂದ್ರ ಯಾದವ್

ಆಮ್ ಆದ್ಮಿ ಪಕ್ಷದಲ್ಲಿ ಭುಗಿಲೆದ್ದಿರುವ ಭಿನಾಭಿಪ್ರಾಯದ ಹಿನ್ನಲೆಯಲ್ಲಿ ಪಕ್ಷ ರಾಜಕೀಯ ವ್ಯವಹಾರಗಳ ಸಮಿತಿಯಿಂದ ಹೊರಬಿದ್ದಿರುವ ಯೋಗೇಂದ್ರ ಯಾದವ್
ಎಎಪಿ ಪಕ್ಷದ ಅಧ್ಯಕ್ಷ ಅರವಿಂದ್ ಕೇಜ್ರಿವಾಲ್
ಎಎಪಿ ಪಕ್ಷದ ಅಧ್ಯಕ್ಷ ಅರವಿಂದ್ ಕೇಜ್ರಿವಾಲ್
Updated on

ನವದೆಹಲಿ: ಆಮ್ ಆದ್ಮಿ ಪಕ್ಷದಲ್ಲಿ ಭುಗಿಲೆದ್ದಿರುವ ಭಿನಾಭಿಪ್ರಾಯದ ಹಿನ್ನಲೆಯಲ್ಲಿ ಪಕ್ಷ ರಾಜಕೀಯ ವ್ಯವಹಾರಗಳ ಸಮಿತಿಯಿಂದ ಹೊರಬಿದ್ದಿರುವ ಯೋಗೇಂದ್ರ ಯಾದವ್ ಎಎಪಿ ವಾಸ್ತವ ಅದರ ಕಲ್ಪನೆಯ ಕೆಟ್ಟ ತೋರೆಣಿಕೆ ಎಂದಿದ್ದಾರೆ.

"ನಾನು ಆಮ್ ಆದ್ಮಿ ಪಕ್ಷದ ವಾಸ್ತವತೆಯ ಒಳಹೊಕ್ಕಿಲ್ಲ, ನನಗೆ ಎಎಪಿ ಎಂಬ ಕಲ್ಪನೆಯ ಮೇಲಷ್ಟೆ ಚಿಂತನೆ. ಎಎಪಿ ಎಂಬ ಕಲ್ಪನೆ ಮತ್ತು ಈಗಿನ ಎಎಪಿ ಎರಡು ಬೇರೆ ಬೇರೆ... ಪ್ಲೇಟೊ ಹೇಳಿದ್ದ ವಾಸ್ತವ ಯಾವಾಗಲು ನಿಜವಾದ ಕಲ್ಪನೆಯ ಕೆಟ್ಟ ತೋರೆಣಿಕೆ ಎಂದು ಹೇಳಿದ್ದು ಸರಿ ಕಾಣುತ್ತಿದೆ" ಎಂದಿದ್ದಾರೆ ಯೋಗೇಂದ್ರ.

"ನಾನು ಪ್ಲೇಟೊನಿಸ್ಟ್ ಅಲ್ಲ. ಆದರೆ ಇಲ್ಲಿ ಈ ಹೋಲಿಕೆ ಅತ್ಯಗತ್ಯ" ಎಂದಿದ್ದಾರೆ. ದೆಹಲಿಯ ರಾಷ್ಟೀಯ ಕಾನೂನು ವಿಶ್ವವಿದ್ಯಾಲಯದಲ್ಲಿ ಕೊಟ್ಟ ಉಪನ್ಯಾಸದ ವೇಳೆ ಅವರು ಹೀಗೆ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com