ಡಿಕೆ ರವಿ ಪ್ರಕರಣ: ಸಿಐಡಿ ಐಜಿಪಿ ಪ್ರಣಬ್‌ ಮೊಹಾಂತಿ ವರ್ಗಾವಣೆಗೆ ಬ್ರೇಕ್

ಪ್ರಣಬ್‌ ಮೊಹಾಂತಿ
ಪ್ರಣಬ್‌ ಮೊಹಾಂತಿ
Updated on
ಬೆಂಗಳೂರು: ದಕ್ಷ ಐಎಎಸ್ ಅಧಿಕಾರಿ ಡಿಕೆ ರವಿ ನಿಗೂಢ ಸಾವಿನ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ ಬೆನ್ನಲ್ಲೇ ಸಿಐಡಿ ಐಜಿಪಿ ಪ್ರಣಬ್‌ ಮೊಹಾಂತಿ ಅವರನ್ನು ದಿಢೀರ್‌ ವರ್ಗಾವಣೆ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದ ರಾಜ್ಯ ಸರ್ಕಾರ, ಇದೀಗ  ಮೊಹಾಂತಿ ವರ್ಗಾವಣೆಗೆ ಬ್ರೇಕ್ ಹಾಕಿದೆ.

ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಪ್ರಣವ್ ಮೊಹಾಂತಿ ವರ್ಗಾವಣೆಯನ್ನು ತಡೆ ಹಿಡಿಯುವ ಮಹತ್ವದ ತೀರ್ಮಾನವನ್ನು ರಾಜ್ಯ ಸರ್ಕಾರ ತೆಗೆದುಕೊಂಡದ್ದು, ರವಿ ನಿಗೂಢ ಸಾವಿನ ತನಿಖೆಯ ಹೊಣೆಯನ್ನು ಮತ್ತೆ ಮೊಹಾಂತಿ ಹೆಗಲಿಗೇರಿಸಿದೆ.

ದಕ್ಷ ಅಧಿಕಾರಿಯೆಂದು ಹೆಸರು ಪಡೆದಿರುವ ಪ್ರಣಬ್‌ ಮೊಹಾಂತಿ ಅವರನ್ನು ನಿನ್ನೆ ಸಿಐಡಿಯಿಂದ ಲೋಕಾಯುಕ್ತಕ್ಕೆ ವರ್ಗಾಯಿಸಿ, ಆ ಸ್ಥಾನಕ್ಕೆ ಸಿ.ಹೆಚ್‌. ಪ್ರತಾಪ್‌ ರೆಡ್ಡಿ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶಿಸಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com