ಪಾಟ್ನಾ: ಸರ್ಕಾರಿ ನೌಕರಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಅಭ್ಯರ್ಥಿಗಳಿಗೆ ಬಿಹಾರ ಸರ್ಕಾರ ನೀಡಿದ್ದ ಭಡ್ತಿ ಮೀಸಲಾತಿಯನ್ನು ಪಾಟ್ನಾ ಉಚ್ಛ ನ್ಯಾಯಾಲಯ ವಜಾ ಮಾಡಿ ಆದೇಶ ನೀಡಿದೆ.
ಸುಶಿಲ್ ಕುಮಾರ್ ಸಿಂಗ್ ಮತ್ತು ಇನ್ನಿಬ್ಬರು ಸರ್ಕಾರದ ಈ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಮಾಡಿದ ವಿಭಾಗೀಯ ಪೀಠ, ೨೦೧೨ ರ ಈ ನೀತಿಯನ್ನು ವಜಾ ಮಾಡಿ ಆದೇಶಿಸಿದೆ.
ನೂರಾರು ಎಸ್ ಸಿ/ ಎಸ್ ಟಿ ಅಧಿಕಾರಿಗಳಿಗೆ ಇದು ಹಿನ್ನಡೆಯಾಗಲಿದೆ ಎಂದು ತಿಳಿದುಬಂದಿದೆ.
Advertisement