ಭಗತ್ ಸಿಂಗ್ ಗೆ ಅವಮಾನ; ಗಾಂಧಿ ಮರಿಮೊಮ್ಮಗನ ಮೇಲೆ ಕೇಸು ದಾಖಲು

ಸ್ವಾತಂತ್ರ್ಯಹೋರಾಟಗಾರ ಶಹೀದ್ ಎ ಅಜಮ್ ಭಗತ್ ಸಿಂಗ್ ಅವರ ವಿರುದ್ಧ ಅವಮಾನಕಾರಿ ಹೇಳಿಕೆಗಳನ್ನು ನೀಡಿರುವ ಆರೋಪದ ಮೇಲೆ ಮಹಾತ್ಮ ಗಾಂಧಿ ಅವರ
ತುಷಾರ್ ಗಾಂಧಿ
ತುಷಾರ್ ಗಾಂಧಿ

ಚಂಡೀಘರ್: ಸ್ವಾತಂತ್ರ್ಯಹೋರಾಟಗಾರ ಶಹೀದ್ ಎ ಅಜಮ್ ಭಗತ್ ಸಿಂಗ್ ಅವರ ವಿರುದ್ಧ ಅವಮಾನಕಾರಿ ಹೇಳಿಕೆಗಳನ್ನು ನೀಡಿರುವ ಆರೋಪದ ಮೇಲೆ ಮಹಾತ್ಮ ಗಾಂಧಿ ಅವರ ಮರಿಮೊಮ್ಮಗ ತುಷಾರ್ ಗಾಂಧಿ ಅವರ ಮೇಲೆ ಪಂಜಾಬ್ ಪೊಲೀಸರು ಕೇಸು ದಾಖಲಿಸಿದ್ದಾರೆ.

ಜನ ಜಾಗೃತಿ ಮಂಚದ ಅಧ್ಯಕ್ಷ ಕೃಷ್ಣ ಲಾಲ್ ನೀಡಿರುವ ದೂರಿನ ಮೇಲೆ ಪೊಲೀಸರು ಐಪಿಸಿ ಸೆಕ್ಷನ್ ೨೯೫ ಎ ಅಡಿ ದೂರು ದಾಖಲಿಸಿದ್ದಾರೆ. ತುಷಾರ್ ಅವರು ಜೈಪುರದಲ್ಲಿ ಮಾಧ್ಯಮದೊಂದಿಗೆ ಮಾತನಾಡುವಾಗ ಭಗತ್ ಸಿಂಗ್ ಅವರು ಬ್ರಿಟಿಶ್ ಆಡಳಿತಗಾರರಿಗೆ ಅಪರಾಧಿಯಾಗಿದ್ದರಿಂದ ಮಹಾತ್ಮ ಗಾಂಧಿ ಭಗತ್ ಸಿಂಗ್ ಅವರ ಮರಣ ದಂಡನೆ ಶಿಕ್ಷೆಯ ಮಧ್ಯೆ ಬರಲಿಲ್ಲ ಎಂದು ಅವರು ಹೇಳಿದ್ದಾರೆ ಎಂದು ದೂರಲಾಗಿದೆ.

ಭಗತ್ ಸಿಂಗ್ ಅವರ ಬಗ್ಗೆ ೨೦ ವರ್ಷಗಳಿಂದ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ಜನ ಜಾಗೃತಿ ಮಂಚ ಮತ್ತು ಇತರ ಸಹ ಸಂಸ್ಥೆಗಳು ಶನಿವಾರ ಜಲಂಧರ್ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿದ್ದಾರೆ. ತುಷಾರ್ ಅವರ ಹೇಳಿಕೆಗಳು ನಮ್ಮ ಭಾವನೆಗಳನ್ನು ಘಾಸಿಗೊಳಿಸಿವೆ ಎಂದು ಕೂಡ ಅವರು ದೂರಿದ್ದಾರೆ.

ಭಗತ್ ಸಿಂಗ್ ಪರ ಸಂಘಟನೆಗಳು ಭಾನುವಾರ ಜಲಂಧರ್ ನ ಭಗತ್ ಸಿಂಗ್ ಚೌಕದಲ್ಲಿ ತುಷಾರ್ ಅವರ ಪ್ರತಿಕೃತಿಯನ್ನು ಸುಟ್ಟ ಘಟನೆ ಕೂಡ ನಡೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com