ಮುಂಬೈ: ತಮ್ಮ ಮಾಜಿ ಆಪ್ತ ಸುಧೀಂದ್ರ ಕುಲಕರ್ಣಿಯವರ ಮುಖಕ್ಕೆ ಮಸಿ ಬಳೆದ ಶಿವಸೇನೆ ಕಾರ್ಯಕರ್ತರು ಕೃತ್ಯವನ್ನು ಮಾಜಿ ಪ್ರಧಾನಿ ಹಾಗೂ ಬಿಜೆಪಿ ಹಿರಿಯ ನಾಯಕ ಎಲ್.ಕೆ.ಆಡ್ವಾಣಿ ತೀವ್ರವಾಗಿ ಖಂಡಿಸಿದ್ದಾರೆ.
ದೇಶದ ಜನತೆ ತಾಳ್ಮೆ ಕಳೆದುಕೊಳ್ಳುತ್ತಿರುವುದು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ. ಯಾವುದೇ ಹೋರಾಟ ಕಾನೂನು ವ್ಯಾಪ್ತಿಯೊಳಗಿರಬೇಕು. ಇಂತಹ ಕೃತ್ಯ ಯಾರೇ ಎಸಗಿರಲಿ ಅಥವಾ ಯಾವುದೇ ಸಂಘಟನೆ ಎಸಗಿರಲಿ. ಅದನ್ನು ತಾವು ಖಂಡಿಸುವುದಾಗಿ ಆಡ್ವಾಣಿ ಹೇಳಿದ್ದಾರೆ.
ಪಾಕಿಸ್ತಾನ ಮಾಜಿ ವಿದೇಶಾಂಗ ಸಚಿವ ಖುರ್ಷಿದ್ ಕಸೌರಿಯವರ ಪುಸ್ತಕ ಬಿಡುಗಡೆ ಕಾರ್ಯಕ್ರಮ ವಿರೋಧಿಸಿ ಕಾರ್ಯಕ್ರಮ ಆಯೋಜ ಸುಧೀಂದ್ರ ಕುಲಕರ್ಣಿ ಅವರ ಮುಖಕ್ಕೆ ಶಿವಸೇನೆ ಕಾರ್ಯಕರ್ತರು ಮಸಿ ಬಳೆದಿದ್ದರು.
ಪಾಕಿಸ್ತಾನ ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವುದರಿಂದ ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಕಸೌರಿಯವರ ಪುಸ್ತಕ ಬಿಡುಗಡೆ ಸಮಾರಂಭವನ್ನು ರದ್ದುಗೊಳಿಸಬೇಕು ಎಂದು ಶಿವಸೇನೆ, ನೆಹರು ಪ್ಲ್ಯಾನಿಟೋರಿಯಂ ಅಧಿಕಾರಿಗಳಿಗೆ ಮನವಿಯೂ ಸಲ್ಲಿಸಿತ್ತು.
Advertisement