'ವಾಹನ ದಟ್ಟನೆಯಿಂದ ಓದಿಗೆ ಅಡಚಣೆ': ಪ್ರಧಾನಿಗೆ ಪತ್ರ ಬರೆದ ೮ ವರ್ಷದ ಬೆಂಗಳೂರು ಬಾಲಕ

ಉತ್ತರ ಬೆಂಗಳೂರಿನ ಬಿ ಇ ಎಲ್ ವೃತ್ತದ ಬಳಿ ಉಂಟಾಗುವ ವಾಹನ ದಟ್ಟಣೆಯಿಂದ ತನ್ನ ವ್ಯಾಸಂಗಕ್ಕೆ ಅಡಚಣೆಯಾಗುತ್ತಿದೆ ಎಂದು ೩ನೆ ತರಗತಿಯ ಬೆಂಗಳೂರಿನ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಉತ್ತರ ಬೆಂಗಳೂರಿನ ಬಿ ಇ ಎಲ್ ವೃತ್ತದ ಬಳಿ ಉಂಟಾಗುವ ವಾಹನ ದಟ್ಟಣೆಯಿಂದ ತನ್ನ ವ್ಯಾಸಂಗಕ್ಕೆ ಅಡಚಣೆಯಾಗುತ್ತಿದೆ ಎಂದು ೩ನೆ ತರಗತಿಯ ಬೆಂಗಳೂರಿನ ಬಾಲಕ ಪ್ರಧಾನ ಮಂತ್ರಿ ಕಾರ್ಯಾಲಯಕ್ಕೆ ಪತ್ರ ಬರೆದಿದ್ದಾನೆ.

ಯಶವಂತಪುರದ ನ್ಯಾಷನಲ್ ಪಬ್ಲಿಕ್ ಶಾಲೆಯಿಂದ ವಿದ್ಯಾರಣ್ಯಪುರದಲ್ಲಿರುವ ದೊಡ್ಡಬೊಮ್ಮನಸಂದ್ರದ ತನ್ನ ಮನೆಗೆ ೩ ಕಿಮೀ ಕ್ರಮಿಸಲು ೪೫ ನಿಮಿಷ ಹಿಡಿಯುತ್ತಿದೆ ಎಂದು ಬಾಲಕ ಪತ್ರದಲ್ಲಿ ತಿಳಿಸಿದ್ದಾನೆ.

ಹೊರ ವೃತ್ತ ರಸ್ತೆಯ ಗೊರಗುಂಟೆಪಾಳ್ಯದ ಜಂಕ್ಷನ್ ಬಳಿ ರೈಲ್ವೇ ಕ್ರಾಸಿಂಗ್ ಗೆ ಮೇಲುಸೇತುವೆ ಕಟ್ತುತ್ತಿರುವುದೇ ಇದಕ್ಕೆ ಕಾರಣ ಎಂದು ಬಾಲಕ ತಿಳಿಸಿದ್ದು ಪ್ರಧಾನ ಮಂತ್ರಿ ಕಾರ್ಯಾಲಯ ಈ ವಿಷಯದ ಬಗ್ಗೆ ಕ್ರಮ ಕೈಗೊಳ್ಳಲು ರೈಲ್ವೇ ಇಲಾಖೆಗೆ ತಿಳಿಸಿದೆಯಂತೆ.

ಈ ಯೋಜನೆಯಿಂದಾಗಿ ಜನರ ಆರೋಗ್ಯವಷ್ಟೇ ಅಲ್ಲದೆ ನನ್ನ ವಿದ್ಯಾಭ್ಯಾಸಕ್ಕೂ ತೊಂದರೆಯಾಗುತ್ತಿದೆ ಎಂದು ಬಾಲಕ ಪತ್ರದಲ್ಲಿ ವಿವರಿಸಿದ್ದಾನೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com