ರಾಜಕಾರಣ ಸೇರುವ ಇರಾದೆಯಿಲ್ಲ: ಅಜಯ್ ದೇವಗನ್

ಬಿಹಾರದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯ ಬಿಜೆಪಿ ಮುಖಂಡ ಸುನಿಲ್ ಕುಮಾರ್ ಅವರ ಪ್ರಚಾರ ಸಭೆಯಲ್ಲಿ ಕಳೆದ ವಾರ ಪಾಲ್ಗೊಂಡ ಬಾಲಿವುಡ್ ನಟ ಅಜಯ್ ದೇವಗನ್
ಬಾಲಿವುಡ್ ನಟ ಅಜಯ್ ದೇವಗನ್
ಬಾಲಿವುಡ್ ನಟ ಅಜಯ್ ದೇವಗನ್

ನವದೆಹಲಿ: ಬಿಹಾರದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯ ಬಿಜೆಪಿ ಮುಖಂಡ ಸುನಿಲ್ ಕುಮಾರ್ ಅವರ ಪ್ರಚಾರ ಸಭೆಯಲ್ಲಿ ಕಳೆದ ವಾರ ಪಾಲ್ಗೊಂಡ ಬಾಲಿವುಡ್ ನಟ ಅಜಯ್ ದೇವಗನ್ ಅವರು ರಾಜಕಾರಣ ಸೇರುವ ಯಾವುದೇ ಇರಾದೆ ಇಲ್ಲ ಎಂದು ತಿಳಿಸಿದ್ದಾರೆ.

ರಾಜಕೀಯಕ್ಕೆ ಸೇರುವಿರೇ ಎಂಬ ಪ್ರಶ್ನೆಗೆ "ಸಾಧ್ಯವೇ ಇಲ್ಲ. ನಾನು ಇದನ್ನು ಮೊದಲೇ ಹೇಳಿದ್ದೇನೆ. ನನಗೆ ರಾಜಕೀಯ ಸೇರುವ ಯಾವುದೇ ಇರಾದೆ ಇಲ್ಲ" ಎಂದಿದ್ದಾರೆ.

ಪ್ರಕಾಶ್ ಝಾ ಅವರ 'ಗಂಗಾಜಲ್' ಮತ್ತು 'ಆರಕ್ಷಣ್' ಸಿನೆಮಾಗಳ ನಟನೆಯಿಂದ ಬಿಹಾರದಲ್ಲಿ ಬಹಳ ಪ್ರಖ್ಯಾತವಾಗಿರುವ ನಟ ಬಿಹಾರದ ಕೆಲವು ಪ್ರಚಾರ ಸಭೆಗಳನ್ನು ತಪ್ಪಿಸಿಕೊಂಡಿದ್ದಾರೆ. ಕಾರಣ ಬೃಹತ್ ಸಂಖ್ಯೆಯಲ್ಲಿ ಜನ ನೆರೆದಿದ್ದರಿಂದ ಹೆಲಿಕ್ಯಾಪ್ಟರ್ ಇಳಿಸದೆ ಆಗದಿದ್ದುದು.

ಇದರಿಂದ ಬಿಹಾರ್ಶರೀಫ್ ಮತ್ತು ನಲಂದಾ ಜನರಲ್ಲಿ ಟ್ವಿಟ್ಟರ್ ಮೂಲಕ ಕ್ಷಮೆ ಕೋರಿದ್ದು "ಬಿಹಾರ್ಶರೀಫ್ ಮತ್ತು ನಲಂದಾ ರ್ಯಾಲಿಗಳಿಗೆ ಬರಲಾಗದಿದ್ದಕ್ಕೆ ಕ್ಷಮೆ ಕೋರುತ್ತೇನೆ. ಜನಸ್ತೋಮ ಹೆಚ್ಚಿದ್ದರಿಂದ ಅಧಿಕಾರಿಗಳು ನನಗೆ ಪರವಾನಗಿ ನೀಡಲಿಲ್ಲ" ಎಂದು ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com