ಬಿಬಿಎಂಪಿ ಕಚೇರಿ (ಸಂಗ್ರಹ ಚಿತ್ರ)
ಬಿಬಿಎಂಪಿ ಕಚೇರಿ (ಸಂಗ್ರಹ ಚಿತ್ರ)

ಮೇಯರ್ ಆಯ್ಕೆ: ಕಾಂಗ್ರೆಸ್-ಬಿಜೆಪಿಗೆ ಪ್ರತಿಷ್ಠೆಯ ಪ್ರಶ್ನೆ

ಒಂದೆಡೆ ಮೈತ್ರಿ ಅಂತಿಮ ಎಂದು ಸಾರಿದ್ದಲ್ಲದೇ ಮೇಯರ್ ಹೆಸರನ್ನೂ ಅಂತಿಮಗೊಳಿಸಿರುವ ಕಾಂಗ್ರೆಸ್, ಅದಕ್ಕೆ ಮೌನ ಸಮ್ಮತಿ ನೀಡಿರುವ ಜೆಡಿಎಸ್ ಇದ್ದರೆ; ಇನ್ನೊಂದೆಡೆ, ಕಾಯ್ದು ನೋಡಿ, ಅಚ್ಚರಿಯ ಫಲಿತಾಂಶ ನೀಡುತ್ತೇವೆ ಎನ್ನುತ್ತಿರುವ ಬಿಜೆಪಿ ಇದೆ...
Published on

ಬೆಂಗಳೂರು: ಒಂದೆಡೆ ಮೈತ್ರಿ ಅಂತಿಮ ಎಂದು ಸಾರಿದ್ದಲ್ಲದೇ ಮೇಯರ್ ಹೆಸರನ್ನೂ ಅಂತಿಮಗೊಳಿಸಿರುವ ಕಾಂಗ್ರೆಸ್, ಅದಕ್ಕೆ ಮೌನ ಸಮ್ಮತಿ ನೀಡಿರುವ ಜೆಡಿಎಸ್ ಇದ್ದರೆ; ಇನ್ನೊಂದೆಡೆ, ಕಾಯ್ದು ನೋಡಿ, ಅಚ್ಚರಿಯ ಫಲಿತಾಂಶ ನೀಡುತ್ತೇವೆ ಎನ್ನುತ್ತಿರುವ ಬಿಜೆಪಿ ಇದೆ. ಎಲ್ಲವೂ ಅಂತಿಮಗೊಂಡಂತಿರುವ ಈ ಕೊನೇ ಕ್ಷಣದಲ್ಲಿ ಅಚ್ಚರಿ ತರಬಹುದಾದ ನಡೆ
ಯಾವುದಿರಬಹುದು ಎಂಬ ಪ್ರಶ್ನೆಗೆ ಅಡ್ಡಮತದಾನದ ಅಪರೂಪದ ಸಾಧ್ಯತೆ ಉತ್ತರವಾಗಿ ನಿಲ್ಲುತ್ತದೆ.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕೂಟದ ಅಭ್ಯರ್ಥಿ ಮಂಜುನಾಥ ರೆಡ್ಡಿ ಮೇಯರ್ ಹಾಗೂ ಜೆಡಿಎಸ್‍ನ ಹೇಮಲತಾ ಉಪ ಮೇಯರ್ ಆಗಿ ಆಯ್ಕೆಯಾಗುವುದು ಬಹುತೇಕ
ಖಚಿತ. ಆದರೆ, ಬಿಜೆಪಿ ಮೇಯರ್ ಹಾಗೂ ಉಪ ಮೇಯರ್ ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿರುವುದರಿಂದ ಚುನಾವಣೆ ರಂಗೇರುತ್ತದೆ.

ಕಾಂಗ್ರೆಸ್-ಜೆಡಿಎಸ್ ನ ಅಸಮಾಧಾನಿತರು ಒಂದು ವೇಳೆ ಅಡ್ಡಮತದಾನ ಮಾಡಿದ್ದೇ ಆದರೆ, ಬಿಜೆಪಿ ಹೇಳುವ ಅಚ್ಚರಿಗೆ ಬಿಬಿಎಂಪಿ ಸಾಕ್ಷಿಯಾದರೂ ಅಚ್ಚರಿಯೇನಿಲ್ಲ. ಆದರೂ ಮೇಯರ್ ಚುನಾವಣೆ ಯಲ್ಲಿ ಅಧಿಕಾರ ಯಾರಿಗೆ ಒಲಿಯು ತ್ತದೆ ಎನ್ನುವುದು ಕೊಂಚ ಅನುಮಾನದಿಂದಲೇ ಕೂಡಿದೆ. ಇದಕ್ಕೆ ಕಾರಣವೆಂದರೆ, ಇಷ್ಟೂ ದಿನ ಸುಮ್ಮನಿದ್ದ ಬಿಜೆಪಿ ದಿಡಿsೀರ್ ಚುರುಕಾಗಿರುವುದು. ಈತನಕ ಕಾಂಗ್ರೆಸ್-ಜೆಡಿಎಸ್‍ನ ರೆಸಾರ್ಟ್ ರಾಜಕಾರಣವನ್ನು ಟೀಕಿಸುತ್ತಾ, ಮೂದಲಿಸುತ್ತಾ ಬಂದಿದ್ದ ಬಿಜೆಪಿ ಮೇಯರ್ ಚುನಾವಣೆಗೆ ಕೆಲವೇ ಗಂಟೆ ಬಾಕಿ ಇರುವಾಗ ರೆಸಾರ್ಟ್ ರಾಜಕಾರಣ ಶುರು ಮಾಡಿದ್ದು.

ನಡೆದೀತೆ ಕೊನೆ ಕ್ಷಣದ ಪವಾಡ?:

ಬಿಜೆಪಿಯ ನಾಯಕರಾದ ಅಶೋಕ್, ಸೋಮಣ್ಣ ನೇತೃತ್ವದ ತಂಡ ಬಿಜೆಪಿಯ 100 ಸದಸ್ಯರನ್ನೂ ಬೆಂಗಳೂರಿನ ಹೊರ ವಲಯದ ರೆಸಾರ್ಟ್ ಗೆ ಕರೆದೊಯ್ದಿದೆ. ಕಾಂಗ್ರೆಸ್ ಐದಾರು ಸದಸ್ಯರು ಬಿಜೆಪಿ ಪರವಾಗಿ ಅಡ್ಡ ಮತದಾನ ಮಾಡಬಹುದು ಎಂಬ ಲೆಕ್ಕಾಚಾರದ ಹಿನ್ನೆಲೆಯಲ್ಲಿ ಕೊನೆ ಗಳಿಗೆಯ ತಂತ್ರ ಹೆಣೆದಿದೆ. ಅಷ್ಟೇ ಅಲ್ಲ. ಮೇಯರ್, ಉಪ ಮೇಯರ್ ಅಭ್ಯರ್ಥಿಗಳನ್ನೂ ಆಯ್ಕೆ ಮಾಡಿ, ಸ್ಥಾಯಿ ಸಮಿತಿ ಚುನಾವಣೆಗೂ ಅಭ್ಯರ್ಥಿಗಳನ್ನು ಸಿದ್ಧಪಡಿಸಿದೆ.

ಸ್ಥಾಯಿ ಸಮಿತಿಗಳ ಚುನಾವಣೆಯಲ್ಲಿ ಗೌಪ್ಯ ಮತದಾನ ನಡೆಯುವುದರಿಂದ ಅಡ್ಡ ಮತದಾನಕ್ಕೆ ಹೆಚ್ಚು ಅವಕಾಶವಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಲು ಬಿಜೆಪಿ ಕಾರ್ಯತಂತ್ರ ರೂಪಿಸಿದೆ. ಅಂದರೆ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ ವೇಳೆ ಕಾಂಗ್ರೆಸ್ ಸದಸ್ಯರು ಬಿಜೆಪಿ ಅಭ್ಯರ್ಥಿ ಪರ ಚಲಾಯಿಸಬಹುದಾದ ಪ್ರಾಶಸ್ತ್ರ್ಯ ಮತಗಳು ಸಿಕ್ಕರೆ ಹೆಚ್ಚು ಸ್ಥಾಯಿ ಸಮಿತಿಗಳನ್ನು ಗಳಿಸಬಹುದು. ಆ ಮೂಲಕ ಕಾಂಗ್ರೆಸ್, ಜೆಡಿಎಸ್ ಅನ್ನು ಇಕ್ಕಟ್ಟಿಗೆ ಸಿಲುಕಿಸಬಹುದು ಎಂಬುದು ಬಿಜೆಪಿ ಲೆಕ್ಕಾಚಾರ. ಹೀಗಾಗಿ ಅಡ್ಡ ಮತದಾನದ ಅಡ್ಡ ಪರಿಣಾಮ ಮೇಯರ್ ಚುನಾವಣೆಯಲ್ಲಿ ಕೊನೆ ಕ್ಷಣದ ಪವಾಡಗಳನ್ನು ಸೃಷ್ಟಿಸುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.

ಈ ಹಿನ್ನೆಲೆಯಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ನಾಯಕರು ದಿನವಿಡೀ ವಿವಿಧ ಹಂತದ ಸಭೆಗಳನ್ನು ನಡೆಸಿ ಕೊನೆ ಕ್ಷಣದ ತಂತ್ರಗಳನ್ನು ರೂಪಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com