ಮಾರ್ಚ್ 13ರಂದು ಈ ಬಸ್ ಪಿಲಿಬಿಟ್ಗೆ ತಲುಪಿದಾಗ ಪೊಲೀಸರ ತಂಡವೊಂದು ಕಚಲಾಪುಲ್ ಘಾಟ್ನಲ್ಲಿ ಈ ಬಸ್ನ್ನು ತಡೆಹಿಡಿದಿತ್ತು. ಅದರಲ್ಲಿದ್ದ 11 ಸಿಖ್ರನ್ನು ಪೊಲೀಸರು ಬಲವಂತವಾಗಿ ಕೆಳಗಿಳಿಸಿದ್ದರು ಎಂದು ಹೇಳಲಾಗುತ್ತಿದೆ. ಅದೇ ವೇಳೆ ಅದರಲ್ಲಿದ್ದ ಮತ್ತು ಇತರ ಪ್ರಯಾಣಿಕರಾದ ಮಹಿಳೆಯರನ್ನು ಮತ್ತು ಮಕ್ಕಳನ್ನು ಪಿಲಿಬಿಟ್ನ ಗುರುದ್ವಾರಕ್ಕೆ ಕರೆದೊಯ್ಯಲಾಯಿತು. ಪುರುಷರನ್ನು ಬೇರೆಯೇ ವಾಹನದಲ್ಲಿ ಕುಳ್ಳಿರಿಸಲಾಯಿತು. ಮುಸ್ಸಂಜೆ ವೇಳೆ ಪೊಲೀಸ್ ತಂಡದೊಂದಿಗೆ ಹೆಚ್ಚುವರಿ ಸೈನಿಕ ಪಡೆಯೂ ಸೇರಿದ್ದು, ಆ ಸಿಖ್ ಜನರನ್ನು ಮೂರು ಗುಂಪುಗಳನ್ನಾಗಿ ಮಾಡಲಾಯಿತು. ಜುಲೈ 12 ಮತ್ತು 13 ರಂದು ಪೊಲೀಸರು ಮೂರು ಎನ್ಕೌಂಟರ್ಗಳ ಮೂಲಕ ಬಿಲ್ಸಂದ್ರಾ, ನೌರಿಯಾ ಮತ್ತು ಪೂರಣ್ಪುರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸ್ ವಶದಲ್ಲಿದ್ದ ಆ ಸಿಖ್ ಜನರನ್ನು ಹತ್ಯೆಗೈದಿದ್ದರು.