ಪಿಎಸ್ಐ ವಿರುದ್ಧ ಜೆಡಿಎಸ್ ಶಾಸಕ ಮಲ್ಲಿಕಾರ್ಜುನ ಖೂಬಾ ಗರಂ

ಮರಳು ಸಾಗಾಟನೆ ಲಾರಿಗಳಿಂದ ಪೊಲೀಸರು ಹಣ ಲೂಟಿ ಮಾಡುತ್ತಿದ್ದಾರೆ ಎಂದು ಪೊಲೀಸ್ ಠಾಣೆಗೆ ಬಂದ ಬಸವಕಲ್ಯಾಣ ಕ್ಷೇತ್ರದ ಜೆಡಿಎಸ್ ಶಾಸಕ ಮಲ್ಲಿಕಾರ್ಜುನ...
ಮಲ್ಲಿಕಾರ್ಜುನ ಖೂಬಾ-ಪಂಡಿತ್ ಸಗರ
ಮಲ್ಲಿಕಾರ್ಜುನ ಖೂಬಾ-ಪಂಡಿತ್ ಸಗರ

ಬಸವಕಲ್ಯಾಣ: ಮರಳು ಸಾಗಾಟನೆ ಲಾರಿಗಳಿಂದ ಪೊಲೀಸರು ಹಣ ಲೂಟಿ ಮಾಡುತ್ತಿದ್ದಾರೆ ಎಂದು ಪೊಲೀಸ್ ಠಾಣೆಗೆ ಬಂದ ಬಸವಕಲ್ಯಾಣ ಕ್ಷೇತ್ರದ ಜೆಡಿಎಸ್ ಶಾಸಕ ಮಲ್ಲಿಕಾರ್ಜುನ ಖೂಬಾ ಅವರು ಸಬ್‌ಇನ್ಸ್‌ಪೆಕ್ಟರ್ ಪಂಡಿತ್ ಸಗರ ವಿರುದ್ಧ ಗರಂ ಆಗಿದ್ದಾರೆ.

ಬಸವಕಲ್ಯಾಣ ಪೊಲೀಸ್ ಠಾಣೆಗೆ ಕಾರ್ಯಕರ್ತರ ಪಡೆಯೊಂದಿಗೆ ಬಂದು ತಮ್ಮ ವಿರುದ್ಧ ಗರಂ ಆದ ಶಾಸಕರ ವರ್ತನೆಯಿಂದ ಬೇಸತ್ತ ಪಂಡಿತ ಸಗರ ಸಹ ನೀವು ಪೊಲೀಸ್ ಠಾಣೆಗೆ ಬಂದಿದ್ದಿರಾ ಅಂತ ನಿಮ್ಮನ್ನು ಭೇಟಿಯಾಗಲು ಬರಬೇಕೆಂಬ ಕಾನೂನು ಇಲ್ಲ ಎಂದು ತಿರುಗೇಟು ನೀಡಿದ್ದಾರೆ.

ಶಾಸಕ ಖೂಬಾ ಹಾಗೂ ಪಿಎಸ್ಐ ಸಗರ ನಡುವಿನ ಮಾತಿನ ಚಕಮಿಕಿ
ಮಲ್ಲಿಕಾರ್ಜುನ ಖೂಬಾ: ನಾನೊಬ್ಬ ಜನಪ್ರತಿನಿಧಿಯಾಗಿ ಇಲ್ಲಿಗೆ ಬಂದಿದ್ದರೂ ಒಳಗೆ ಬನ್ನಿ ಅಂತಾ ಯಾರೂ ಕರೆಯುತ್ತಿಲ್ಲ. ಇಲ್ಲಿನ ಪಿಎಸ್ಐ ಯಾರು ಅಂತಾ ಕೂಡ ಇದೂವರೆಗೂ ನನಗೆ ಗೊತ್ತಿಲ್ಲ..

ಪಿಎಸ್ಐ ಪಂಡಿತ್ ಸಗರ: ಏನ್ರೀ?

ಮಲ್ಲಿಕಾರ್ಜುನ ಖೂಬಾ: ಏಯ್ ಏನಯ್ಯಾ ನಿಮಗೇನಾದ್ರು ಅಂದೇವಾ? ನಿಮಗೇನಾದ್ರೂ ಕೇಳೋಕೆ ಬಂದೇವಾ?

ಪಿಎಸ್ಐ ಪಂಡಿತ್ ಸಗರ: ಅಲ್ಲಾ.. ನಾನು ನಿಮ್ಮನ್ನು ಕೇಳೋಕೆ ಬರಬೇಕಾ? ನಾನು ಯಾರನ್ನೂ ಕೇಳಿಲ್ಲ, ಬಂದಿಲ್ಲ. ನಾನು ಯಾರಿಗೂ ಕೇಳೋದು ಇಲ್ಲ.

ಮಲ್ಲಿಕಾರ್ಜುನ ಖೂಬಾ: ಏಯ್ ಈ ಕಡೆ ಮೈಕ್ ತಾರೋ...

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com