ವಿಧಾನಸಭೆಯ ವಿಶೇಷ ಅಧಿವೇಶನದ ಎರಡನೇ ದಿನವಾದ ಇಂದು ವಿರೋಧ ಪಕ್ಷಗಳ ಶಾಸಕರು ಸರ್ಕಾರ ವಿರೋಧಿ ಬ್ಯಾನರ್ ಗಳನ್ನು ಪ್ರದರ್ಶಿಸಿ, ಬುಲಂದ್ಶಹರ್ ನಲ್ಲಿ ನಡೆದ ಇತ್ತೀಚಿನ ರೇಪ್ ವಿರುದ್ಧ, ಅಪರಾಧಗಳು ಹೆಚ್ಚುತ್ತಿರುವ, ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ, ದಲಿತರ ಮೇಲೆ ದೌರ್ಜನ್ಯಗಳ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ.