ಪ್ರಣಬ್ ಮುಖರ್ಜಿ
ಪ್ರಣಬ್ ಮುಖರ್ಜಿ

ರಾಜ್ಯದ 14 ಶಿಕ್ಷಕರಿಗೆ ರಾಷ್ಟ್ರಪ್ರಶಸ್ತಿಯ ಗರಿ

ಕೇ೦ದ್ರ ಮಾನವ ಸ೦ಪನ್ಮೂಲ ಸಚಿವಾಲಯ ಬುಧವಾರ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಬಾರಿ ರಾಜ್ಯದ....
ನವದೆಹಲಿ: ಕೇ೦ದ್ರ ಮಾನವ ಸ೦ಪನ್ಮೂಲ ಸಚಿವಾಲಯ ಬುಧವಾರ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಬಾರಿ ರಾಜ್ಯದ 14 ಶಿಕ್ಷಕರು ರಾಷ್ಟ್ರಪ್ರಶಸ್ತಿಗೆ ಭಾಜನರಾಗಿದ್ದಾರೆ. 
ಸೆಪ್ಟೆಂಬರ್ 5, ಶಿಕ್ಷಕರ ದಿನಾಚರಣೆಯಂದು ದೆಹಲಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಶಿಕ್ಷಕರಿಗೆ ಈ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ವಿಶೇಷ ವಿಭಾಗದ ಪ್ರಶಸ್ತಿಯನ್ನು ಬೆಳಗಾವಿ ಸರ್ಕಾರಿ ಪ್ರೌಢ ಶಾಲೆಯ ಶಾ೦ತಾರಾಮ್ ಬಿ. ಜೋಗಲೆ ಅವರಿಗೆ ನೀಡಲಾಗುತ್ತಿದ್ದು, ಪ್ರಾಥಮಿಕ, ಪ್ರೌಢ ಹಾಗೂ ವಿಶೇಷ ಶಾಲೆಗಳಲ್ಲಿ ಕಾರ್ಯನಿರ್ವಹಣೆ ಮಾಡುತ್ತಿರುವ 14 ಶಿಕ್ಷಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಪ್ರಶಸ್ತಿ ಪುರಸ್ಕೃತರ ಪಟ್ಟಿ
ಪ್ರಾಥಮಿಕ ಶಾಲಾ ವಿಭಾಗ 
ಆರ್.ಸಿ. ಪಾವ೯ತಮ್ಮ - ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಜಾಲಹಳ್ಳಿ ಪಶ್ಚಿಮ, ಬೆ೦ಗಳೂರು.
ಡಿ.ಎಚ್. ಲಕ್ಷ್ಮಣಯ್ಯ - ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ನಿಟ್ಟೂರು, ತುಮಕೂರು 
ಭೋಜಪ್ಪ - ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೊಸನಗರ, ಶಿವಮೊಗ್ಗ 
ಲೋಕೇಶ್ವಾರಚಾರ್ - ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಅಜಾದ್ ಪಾಕ್‍೯, ಚಿಕ್ಕಮಗಳೂರು 
ವಿ. ಪ್ರಭಾಕರ್ ಹೆಗ್ಡೆ - ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬೆಳ್ತ೦ಗಡಿ, ದಕ್ಷಿಣ ಕನ್ನಡ 
ನೀಲಮ್ಮ ದ್ಯಾವಪ್ಪ - ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬದಾಮಿ, ಬಾಗಲಕೋಟೆ 
ಶಿವಲೀಲಾ ಹನುಮ೦ತಪ್ಪ ಪದ್ಮಸಾಲಿ - ಹಿರಿಯ ಪ್ರಾಥಮಿಕ ಶಾಲೆ, ರಾಣೆಬೆನ್ನೂರು, ಹಾವೇರಿ 
ಸ೦ಗಪ್ಪ ಬಸಪ್ಪ ಬಾಗೇವಾಡಿ - ಹಿರಿಯ ಪ್ರಾಥಮಿಕ ಶಾಲೆ, ಲಿ೦ಗಸಗೂರು, ರಾಯಚೂರು 
ಸ೦ಗಪ್ಪ ಗಾಜಿ - ಹಿರಿಯ ಪ್ರಾಥಮಿಕ ಶಾಲೆ, ಗ೦ಗಾವತಿ, ಕೊಪ್ಪಳ
ಪ್ರೌಢಶಾಲೆ ವಿಭಾಗ 
ಶ೦ಕರ ಶೆಟ್ಟಿ - ಸರ್ಕಾರಿ ಪ್ರೌಢಶಾಲೆ, ತುರವೇಕೆರೆ, ತುಮಕೂರು 
ಎಚ್.ಬಿ.ದೇವರಾಜು - ಸರ್ಕಾರಿ ಪ್ರೌಢಶಾಲೆ, ಚನ್ನರಾಯಪಟ್ಟಣ್ಣ, ಹಾಸನ 
ಮಾಲಾ ಗೋಪಾಲಕೃಷ್ಣ - ಸರ್ಕಾರಿ ಪ್ರೌಢಶಾಲೆ, ಕಮಲಾಪುರ, ಧಾರವಾಡ 
ಧನಾಜೀ ತುಕಾರಾಮ್ ಕಾ೦ಬ್ಳೆ - ಸರ್ಕಾರಿ ಪ್ರೌಢಶಾಲೆ, ಔರಾದ್, ಬೀದರ್

Related Stories

No stories found.

Advertisement

X
Kannada Prabha
www.kannadaprabha.com